Advertisement
ಮಣಿಪಾಲದ “ಉದಯವಾಣಿ’ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಉದಯವಾಣಿ ದಿನಪತ್ರಿಕೆಯು ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ “ಚಿಗುರು ಚಿತ್ರ-2023′ ಪ್ರತಿಷ್ಠಿತ ಮಕ್ಕಳ ಫೋಟೋ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
Related Articles
Advertisement
ಎಂಎಂಎನ್ಎಲ್ ಉಪಾಧ್ಯಕ್ಷ (ನ್ಯಾಶನಲ್ ಹೆಡ್-ಮ್ಯಾಗಜಿನ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ರಾಮಚಂದ್ರ ಮಿಜಾರು ನಿರೂಪಿಸಿ, 53 ವರ್ಷಗಳಿಂದ ವೈಶಿಷ್ಟ éಪೂರ್ಣ ಕಾರ್ಯಕ್ರಮಗಳ ಮೂಲಕ ಉದಯವಾಣಿ ನಿರಂತರವಾಗಿ ಓದುಗರೊಂದಿಗೆ ಬೆರೆತು ಹೋಗಿದೆ. ಈ ಸ್ಪರ್ಧೆಯ ಮೂಲಕ ನಮ್ಮೆಲ್ಲ ಓದುಗರಿಗೆ ತಮ್ಮ ಸಿಹಿ ನೆನಪುಗಳನ್ನು ಹಾಗೂ ಮಧುರ ಬಾಂಧವ್ಯವನ್ನು ನೆನಪಿಸುವ ಅವಕಾಶವನ್ನು ಒದಗಿಸಿದೆ ಎಂದರು.
ಮಾನವ ಸಂಪದ ವಿಭಾಗದ ಮ್ಯಾನೇಜರ್ ಉಷಾರಾಣಿ ಕಾಮತ್ ಸ್ವಾಗತಿಸಿದರು. ಪ್ರಸರಣ ಮತ್ತು ಉತ್ಪನ್ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸತೀಶ್ ಶೆಣೈ ವಂದಿಸಿದರು.
ಬಹುಮಾನ ವಿಜೇತ ಮಕ್ಕಳು
ಕಾರ್ಕಳ ರೆಂಜಾಳದ ಆರವ್ ಶೆಣೈ ಪ್ರಥಮ, ಮಂಗಳೂರು ಕೂಳೂರಿನ ಹಿನಾಲ್ ಡಿ. ಸುವರ್ಣ ದ್ವಿತೀಯ, ಮಂಗಳೂರು ಹೊಗೆಬೈಲು ಕೆ. ಆಕಾಂಕ್ಷಾ ಪ್ರಭು ತೃತೀಯ, ಮಂಗಳೂರು ಗುಂಡಿಯಲ್ಕೆಯ ಭಕ್ತಿಪ್ರಿಯ ಎ. ಭಂಡಾರಿ, ಮಂಗಳೂರಿನ ಆಯುಕ್ತ್ ಅಜಿತ್ ಡಿ., ಚೇರ್ಕಾಡಿಯ ಅನ್ಶೂಲ್ ಪಿ. ಆಚಾರ್ಯ, ಉಡುಪಿಯ ರಿದ್ಧಿ ಭಟ್ ಮತ್ತು ಕುಂದಾಪುರ ಕೋಣಿಯ ಅಹನ್ಯಾ ಜಿ. ದೇವಾಡಿಗ ಸಮಾಧಾನಕರ ಬಹುಮಾನ ಪಡೆದರು.
“ಉದಯವಾಣಿ’ ಪತ್ರಿಕೆಯ ಮೇಲಿರುವ ಅಭಿಮಾನದಿಂದ ಈ ಸ್ಪರ್ಧೆಯಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇವೆ. ಬಹುಮಾನ ಬಂದಿರುವುದಕ್ಕಿಂತ ಮಗುವಿನ ಭಾವಚಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಖುಷಿ ಕೊಟ್ಟಿದೆ.-ಅಶೋಕ್ ಗುಂಡಿಯಲ್ಕೆ, ಮಂಗಳೂರು ಉದಯವಾಣಿ ಆಯೋಜಿಸಿದ ಈ ಸ್ಪರ್ಧೆಯ ಫಲಿತಾಂಶಕ್ಕಾಗಿ ನ. 14ರ ಮುಂಜಾನೆ ಪತ್ರಿಕೆಗಾಗಿ ಕಾಯುತ್ತಿದ್ದೆ. ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಪತ್ರಿಕೆ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ.
– ಶ್ರೇಯಾ ಸಿ. ಸಾಲ್ಯಾನ್ ಬಹುಮಾನ ಬಂದಿರುವುದಕ್ಕೆ ತುಂಬಾ ಆನಂದವಾಗಿದೆ. ನಮ್ಮ ಮಗುವಿಗೆ ಬಹುಮಾನ ಬರುತ್ತದೆ ಎಂದು ಗೊತ್ತಿರಲಿಲ್ಲ. ಇದು ನಮಗೆ ಅತ್ಯಂತ ಹೆಮ್ಮೆ ತಂದಿದೆ.
– ದಿವ್ಯಾ ಬಿ. ಮಂಗಳೂರು