Advertisement

ಮೇಲ್ಸೇತುವೆ ಉದ್ಯಾನವನದಲ್ಲಿ ಉದಯರಾಗ

10:33 AM Apr 02, 2018 | Team Udayavani |

ಸುರತ್ಕಲ್ : ನಾಗರಿಕ ಸಲಹಾ ಸಮಿತಿ, ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುರತ್ಕಲ್‌ ಫ್ಲೈ ಓವರ್‌ ತಳಭಾಗದ ಉದ್ಯಾನವನದಲ್ಲಿ ಉದಯರಾಗ ಸಂಗೀತ ಕಾರ್ಯಕ್ರಮ
ಜರಗಿತು.

Advertisement

ವಿಧಾನಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಉದ್ಘಾಟಿಸಿ ಮಾತನಾಡಿ, ಸಂಗೀತವೆಂಬುದು ಮಾಂತ್ರಿಕ ಶಕ್ತಿಯಿಂದ ಕೂಡಿದ ವಿದ್ಯೆ. ಸರ್ವರನ್ನೂ ಆಕರ್ಷಿ ಸುವ ಶಕ್ತಿಯಿದ್ದು ಸುರತ್ಕಲ್‌ನ ಉದ್ಯಾನವನದಲ್ಲಿ ಆಯೋ
ಜಿಸಿರುವುದು ಶ್ಲಾಘನೀಯ ಎಂದರು.

ಸುರತ್ಕಲ್‌ ರೋಟರಿ ಅಧ್ಯಕ್ಷ ಡಾ| ಹರಿಕೃಷ್ಣನ್‌, ಪ್ರೊ| ಕೆ. ರಾಜ್‌ ಮೋಹನ್‌ ರಾವ್‌, ಮಣಿಕೃಷ್ಣ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್‌, ಕೃಷ್ಣಮೂರ್ತಿ ಪಿ., ಕುಮಾರಸ್ವಾಮಿ, ಸತೀಶ್‌ ಸದಾನಂದ್‌, ಲೋಕೇಶ್‌ ಮತ್ತಿತರರು ಉಪಸ್ಥಿತರಿದ್ದರು. ಸಂಗೀತದಲ್ಲಿ ಶರಣ್ಯಾ ಕೆ.ಎಸ್‌., ಸುಮೇಧಾ ಕೆ.ಎಸ್‌. ಹಾಡುಗಾರಿಕೆ, ಧನುಶ್ರೀ ಶಬರಾಯ ವಯಲಿನ್‌, ಸುಮುಖ ಕಾರಂತ್‌ ಮೃದಂಗದಲ್ಲಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next