Advertisement

ಕುಂದಾಪುರದಲ್ಲಿ ಉದಯ ಕಿಚನೆಕ್ಟ್ಸ್ ಮಳಿಗೆ ಉದ್ಘಾಟನೆ, ವಿಶೇಷ ಮಾರಾಟ

03:19 PM Aug 09, 2018 | Sharanya Alva |

ಕುಂದಾಪುರ: ಉದಯ ಸಮೂಹ ಸಂಸ್ಥೆಯ ಗೃಹೋಪಕರಣ, ಹೋಟೆಲ್, ಕ್ಯಾಟರಿಂಗ್ ಹಾಗೂ ದಿನಬಳಕೆಯ ಅಡುಗೆ ಮನೆಯ ಸಾಮಗ್ರಿಗಳ ಮಳಿಗೆ ಉದಯ ಕಿಚನೆಕ್ಟ್ಸ್ ನ 10ನೇ ರಿಟೇಲ್ ಸೂಪರ್ ಬಜಾರ್ ಅನ್ನು ಕುಂದಾಪುರದ ಪಾರಿಜಾತ ಹೋಟೆಲ್ ಸಮೀಪದ ಶಂಕರ ಶೇಟ್ ಟವರ್ಸ್ ನಲ್ಲಿ ಗುರುವಾರ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

Advertisement

ರಿಬ್ಬನ್ ಕತ್ತರಿಸಿ, ಜ್ಯೋತಿ ಬೆಳಗಿಸುವ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿ ಉದಯ ಕಿಚನೆಕ್ಟ್ಸ್ ಮಳಿಗೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿ ಮಹಾಪ್ರಬಂಧಕ ಭಾಸ್ಕರ ಹಂದೆ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಎ.ಶೆಟ್ಟಿ, ಶಂಕರ ಶೇಟ್ ಟವರ್ಸ್ ಮಾಲಕಿ ಸುಂದರಿ ಎ.ಶೇಟ್,  ಉದಯ ಸಮೂಹ ಸಂಸ್ಥೆಯ ಮಾಲಕ ರಮೇಶ್ ಎ. ಬಂಗೇರ, ಉದಯ ಸಮೂಹ ಸಂಸ್ಥೆಯ ಮಹಾಪ್ರಬಂಧಕ ಉಮೇಶ್ ಬಾಧ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಉದ್ಘಾಟನೆ ಕೊಡುಗೆ:

ಮಳಿಗೆ ಉದ್ಘಾಟನೆ ಪ್ರಯುಕ್ತ ಆಗಸ್ಟ್ 9ರಿಂದ 19ರವರೆಗೆ ವಿಶೇಷ ಕೊಡುಗೆ ಮಾರಾಟ ಇದ್ದು, ಶೇ.60ರವರೆಗೆ ದರ ಕಡಿತ, ಕೋಂಬೋ ಆಫರ್ ಹಾಗೂ ಬಹುಮಾನಗಳಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next