Advertisement

ಪಾಕ್‌ ಸೇನೆಯ ಗುಂಡಿಗೆ ಇಬ್ಬರು ಯೋಧರು ಹುತಾತ್ಮ

06:00 AM Dec 07, 2018 | Team Udayavani |

ಜಮ್ಮು/ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಮಚಿಲ್‌ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಯೋಧರು ಅಪ್ರಚೋ ದಿತವಾಗಿ ಹಾರಿಸಿದ ಗುಂಡು ತಗುಲಿ ಯೋಧರೊಬ್ಬರು ಹುತಾತ್ಮ ರಾಗಿದ್ದಾರೆ. ಬೆಳಗ್ಗೆ 10.45ಕ್ಕೆ ಈ ಘಟನೆ ನಡೆದಿದೆ ಎಂದು ಸೇನೆ ಹೇಳಿದೆ. ಬುಧವಾರ ಉರಿ ವಲಯದಲ್ಲಿ ನಡೆದಿದ್ದ ಫೈರಿಂಗ್‌ನಲ್ಲಿ ಯೋಧರೊಬ್ಬರಿಗೆ ಗಾಯಗಳಾಗಿವೆ.

Advertisement

ಮತ್ತೂಂದು ಘಟನೆಯಲ್ಲಿ ಸುಂದರ್‌ಬನಿ ವಲಯದಲ್ಲಿ ಗಡಿಯಾಚೆಯಿಂದ ಪಾಕ್‌ ಯೋಧರು ನಡೆಸಿದ ಸ್ನೆ„ಪರ್‌ ದಾಳಿಯಿಂದ ಬಿಎಸ್‌ಎಫ್ನ  ಕಾನ್‌ಸ್ಟೇಬಲ್‌ ಪಿ.ಬಿಸ್ವಾಸ್‌ ಹುತಾತ್ಮನಾಗಿದ್ದು, ಯೋಧ ಮಾನ್ಸಾ ರಾಮ್‌ ಎಂಬುವರಿಗೆ ಗಾಯಗಳಾಗಿವೆ.

ಇಮ್ರಾನ್‌ ಖಾನ್‌ ಆರೋಪ: ಈ ನಡುವೆ, ಸಿಖ್ಬರಿಗಾಗಿ ಕರ್ತಾರ್ಪುರ್‌ ಕಾರಿಡಾರ್‌ ಸ್ಥಾಪಿಸಲು ನಾವು ಮುಂದಾಗಿದ್ದರೂ, ಭಾರತ ಸರ್ಕಾರ ಅದರಲ್ಲಿ ರಾಜಕೀಯ ಹುಡುಕುತ್ತಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ. ಪಂಜಾಬ್‌ ಸಚಿವ ನವ್‌ಜೋತ್‌ ಸಿಧು ಈ ವಿಚಾರವನ್ನು ತಮ್ಮ ಬಳಿ ಪ್ರಸ್ತಾಪಿಸಿದ್ದರು. ಭಾರತದ ಮಾಧ್ಯಮಗಳು ಕರ್ತಾರ್ಪುರ್‌ ವಿಚಾರಕ್ಕೆ ರಾಜಕೀಯದ ಬಣ್ಣ ಕೊಟ್ಟು ವರದಿ ಮಾಡಿವೆ ಎಂದೂ ಖಾನ್‌ ಆಕ್ಷೇಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next