Advertisement

ಪೊಲೀಸ್‌ ಕಸ್ಟಡಿಯಿಂದ ಇಬ್ಬರು ವಿಚಾರಣಾಧೀನ ಕೈದಿಗಳು ಪರಾರಿ

11:27 AM Oct 25, 2017 | Team Udayavani |

ಮುಜಫ‌ರನಗರ : ಕೈರಾನಾ ನಗರದಲ್ಲಿ ಕೋರ್ಟ್‌ ವಿಚಾರಣೆಯ ಬಳಿಕ ಜಿಲ್ಲಾ ಬಂಧೀಖಾನೆಗೆ ಒಯ್ಯಲ್ಪಡುತ್ತಿದ್ದ ಇಬ್ಬರು ವಿಚಾರಣಾಧೀನ ಕೈದಿಗಳು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.

Advertisement

ಪರಾರಿಯಾಗಿರುವ ವಿಚಾರಣಾಧೀನ ಕೈದಿಗಳನ್ನು ಸುಶೀಲ್‌ ಮತ್ತು ವಿಶಾಲ್‌ ಎಂದು ಗುರುತಿಸಲಾಗಿದೆ. ಇವರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. 

ಇವರನ್ನು ಕೋರ್ಟ್‌ ವಿಚಾರಣೆಯ ಬಳಿಕ ಪೊಲೀಸ್‌ ವ್ಯಾನ್‌ನಲ್ಲಿ ಬಂಧೀಖಾನೆಗೆ ತರಲಾಗುತ್ತಿತ್ತು. ಮುಜಫ‌ರನಗರ ರಸ್ತೆಯಲ್ಲಿ ವ್ಯಾನ್‌ ಸ್ವಲ್ಪ ಹೊತ್ತು ನಿಂತಾಗ ಇವರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದರು ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ (ಗ್ರಾಮಾಂತರ) ಅಜಯ್‌ ಸಹದೇವ್‌ ತಿಳಿಸಿದ್ದಾರೆ.

ಪರಾರಿಯಾದ ಈ ಕೈದಿಗಳ ಜತೆಗಿದ್ದ ಮೂವರು ಕಾನ್‌ಸ್ಟೆಬಲ್‌ಗ‌ಳನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಪರಾರಿಯಾದ ಕೈದಿಗಳಿಗಾಗಿ ಶೋಧ ಕಾರ್ಯ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next