Advertisement

Sringeri ನದಿಯಲ್ಲಿ ಮುಳುಗಿ ಇಬ್ಬರು ವಿಧ್ಯಾರ್ಥಿಗಳು ಮೃತ್ಯು

06:44 PM May 19, 2023 | Team Udayavani |

ಶೃಂಗೇರಿ : ನೆಮ್ಮಾರು ಸಮೀಪ ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

Advertisement

ಮೃತರು ಹರಿಹರಪುರದ ರಕ್ಷಿತ್ ಮತ್ತು ಶೃಂಗೇರಿಯ ಸುಂಕದ ಮಕ್ಕಿಯ ಪ್ರಜ್ವಲ್ ಎನ್ನುವವರಾಗಿದ್ದಾರೆ. ರಕ್ಷಿತ್ ಹಾಗೂ ಪ್ರಜ್ವಲ್ ಶೃಂಗೇರಿಯ ಖಾಸಗಿ ಕಾಲೇಜಿನ 14 ವಿದ್ಯಾರ್ಥಿಗಳೊಂದಿಗೆ ಈಜಲು ತೆರಳಿದ್ದರು.

ರಕ್ಷಿತ್ ನೀರಿನಲ್ಲಿ ಸಿಲುಕಿಕೊಂಡಿದ್ದಾಗ ಪ್ರಜ್ವಲ್‌ ಆತನ ರಕ್ಷಣೆಗೆ ತೆರಳಿದ್ದು ಆತನೂ ನೀರು ಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ.

ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next