Advertisement

Surathkal ಎರಡು ಪ್ರತ್ಯೇಕ ಆತ್ಮಹತ್ಯೆ ಪ್ರಕರಣ

11:10 PM Oct 11, 2023 | Team Udayavani |

ಸುರತ್ಕಲ್‌: ಇಲ್ಲಿನ ಹೊಟೇಲೊಂದರ ರೂಂ ಬಾಯ್‌ ಆಗಿ ಇತ್ತೀಚೆಗಷ್ಟೆ ಕೆಲಸಕ್ಕೆ ಸೇರಿದ್ದ ಬಾಗಲಕೋಟೆ ಮೂಲದ ಮಣಿಕಂಠ(23)ಬುಧವಾರ ತಾನು ಕೆಲಸ ಮಾಡುತ್ತಿದ್ದ ಹೊಟೇಲ್‌ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಸುರತ್ಕಲ್‌ನ ವಿವಿಧ ಲಾಡ್ಜ್ ನಲ್ಲಿ ಕೆಲಸ ಮಾಡಿದ್ದ ಈತ ಹೆದ್ದಾರಿ ಬದಿ ಇರುವ ಹೊಟೇಲ್‌ ಸದಾನಂದ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಹೆಚ್ಚು ಮಾತುಕತೆ ನಡೆಸದ ತನ್ನಷ್ಟಕ್ಕೆ ಕೆಲಸ ಮಾಡಿಕೊಂಡಿದ್ದ ಈತ ಬುಧವಾರ ಸಮೀಪದ ಆಂಗಡಿಯಲ್ಲಿ 3 ಸಾವಿರ ರೂ. ಮನಿಟ್ರಾನ್ಸ್‌ಫರ್‌ ಮೂಲಕ ಯಾರಿಗೋ ಕಳಿಸಿದ್ದು, ಬಳಿಕ ಊಟ ಮಾಡಿ ಕೋಣೆಗೆ ತೆರಳಿ ಏಕಾಏಕಿ ಈ ಕೃತ್ಯ ಎಸಗಿದ್ದಾನೆ. ಸಾಲಬಾಧೆ ಇಲ್ಲವೇ ಯಾವುದೋ ಕಾರಣಕ್ಕೆ ಮನನೊಂದು ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ
ಪಣಂಬೂರು ಸಮೀಪದ ತಣ್ಣೀರುಬಾವಿ ಬಳಿ ಇರುವ ದೈವಸ್ಥಾನವೊಂದರಲ್ಲಿ ಮಡಿಕೇರಿ ಮೂಲದ ಗೋಪಾಲ(64)ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೀಚ್‌ಗೆ ಬಂದು ಸುತ್ತಾಡಿದ್ದ ಈತ ಸಮೀಪದ ದೈವಸ್ಥಾನದ ವಠಾರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next