Advertisement

ತೊಂಡಿಹಾಳ ಹಳ್ಳದಲ್ಲಿ ಇಬ್ಬರು ಪೊಲೀಸರು ನೀರುಪಾಲು: ಒಬ್ಬರ ಮೃತದೇಹ ಪತ್ತೆ

04:28 PM Sep 06, 2022 | Team Udayavani |

ಕೊಪ್ಪಳ: ಬೈಕ್ ನಲ್ಲಿ ಬರುತ್ತಿದ್ದ ಇಬ್ಬರು ಪೊಲೀಸರು ಹಳ್ಳದಲ್ಲಿ ನೀರುಪಾಲಾದ ಘಟನೆ ಕೊಪ್ಪಳ ಜಿಲ್ಲೆಯ ತೊಂಡಿಹಾಳದಲ್ಲಿ ನಡೆದಿದೆ.

Advertisement

ಕೊಪ್ಪಳ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯ ಮಹೇಶ ಹಾಗು ನಿಂಗಪ್ಪ ಎಂಬ ಪೊಲೀಸರು ನೀರುಪಾಲಾಗಿದ್ದಾರೆ.

ಸೋಮವಾರ ಗಜೇಂದ್ರಗಡದಲ್ಲಿ ರೈತರ ಪ್ರತಿಭಟನೆಯ ಬಂದೋಬಸ್ತ್ ಗೆ ತೆರಳಿದ್ದ ಪೊಲೀಸರಿಬ್ಬರು ಬೈಕ್ ನಲ್ಲಿ ಕರ್ತವ್ಯ ಮುಗಿಸಿ ವಾಪಾಸ್ಸಾಗುತ್ತಿರುವಾಗ ಘಟನೆ ನಡೆದಿದೆ. ಇವರ ಮೊಬೈಲ್ ಲೊಕೇಶನ್ ತೊಂಡಿಹಾಳ ಹಳ್ಳದಲ್ಲಿ ತೋರಿಸುತ್ತಿದೆ. ಹೀಗಾಗಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದಿಂದ ಶೋಧಕಾರ್ಯ ಆರಂಭವಾಗಿದೆ.

ಇದನ್ನೂ ಓದಿ:ಎರಡು ತಂಡಗಳಲ್ಲಿ ಬಿಜೆಪಿ ರಾಜ್ಯ ಪ್ರವಾಸ: ಇಲ್ಲಿದೆ ಸಂಪೂರ್ಣ ಪಟ್ಟಿ

ಓರ್ವ ಪೇದೆ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬರ ಮೃತದೇಹಕ್ಕೆ ಹುಡುಕಾಟ ನಡೆಸಲಾಗುತ್ತಿದೆ.

Advertisement

ಸ್ಥಳಕ್ಕೆ ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next