Advertisement

ಮುಂದುವರಿದ ರಾಜೀನಾಮೆ ಪರ್ವ;ಸಚಿವ ಎಂಟಿಬಿ,ಸುಧಾಕರ್‌ ರಿಸೈನ್‌

10:58 AM Jul 11, 2019 | Team Udayavani |

ಬೆಂಗಳೂರು : 13 ಶಾಸಕರ ರಾಜೀನಾಮೆ ಬಳಿಕ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಮತ್ತೆ ಇಬ್ಬರು ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ಬುಧವಾರ ಬೆಳಗ್ಗೆ ಸ್ಪೀಕರ್‌ ಕಚೇರಿಗೆ ಆಗಮಿಸಿದ ಹೊಸಕೋಟೆ ಶಾಸಕ , ಸಚಿವ ಎಂಟಿಬಿ ನಾಗರಾಜ್‌ ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಡಾ.ಸುಧಾಕರ್‌ ಅವರು ರಾಜೀನಾಮೆ ನೀಡಿದ್ದಾರೆ.

ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಹೈಡ್ರಾಮಾ

ರಾಜೀನಾಮೆ ನೀಡಿದ ಸುಧಾಕರ್‌ ಅವರನ್ನು ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ದಿನೇಶ್‌ ಗುಂಡೂರಾವ್‌ ಮತ್ತಿತರ ಮುಖಂಡರು ಸುತ್ತುವರಿದು ಆಕ್ರೋಶ ಹೊರ ಹಾಕಿದರು. ಸುಧಾಕರ್‌ ಅವರನ್ನು ಎಳೆದಾಡಿದರು.ಸುಧಾಕರ್‌ ಅವರನ್ನು ಸಚಿವ ಜಾರ್ಜ್‌ ಅವರ ಕೊಠಡಿಗೆ ಕರೆದೊಯ್ದು ಸಂಧಾನಕ್ಕೆ ಯತ್ನಿಸಲಾಯಿತು. ಸಿದ್ದರಾಮಯ್ಯ ಅವರು ಎದುರು ಸುಧಾಕರ್‌ ಅವರನ್ನು ಕರೆದೊಯ್ಯುತ್ತಿದ್ದಾರೆ.

Advertisement

ಯಾವುದೇ ರಾಜೀನಾಮೆ ಅಂಗೀಕರಿಸಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್‌, ನಾನು ಯಾವುದೇ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ರಾತ್ರಿ ಬೆಳಗಾಗುವುದರ ಒಳಗೆ ನಾನಿದನ್ನು ಮಾಡಲಾಗುವುದಿಲ್ಲ. ಜೂನ್‌ 17 ರ ವರೆಗೆ ಸಮಯಾವಕಾಶ ನೀಡಿದ್ದೇನೆ. ನಿಯಮಾವಳಿಗಳ ಪ್ರಕಾರ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಕ್ರಮಬದ್ಧವಾಗಿಲ್ಲದ ನಾಮಪತ್ರಗಳನ್ನು ಮಾತ್ರ ನಾನು ತಿರಸ್ಕರಿಸಿದ್ದೇನೆ ಎಂದರು.

ಇಬ್ಬರ ರಾಜೀನಾಮೆಯಿಂದ ಒಟ್ಟು 12 ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿದಂತಾಗಿದೆ. ಮೂವರು ಜೆಡಿಎಸ್‌ ಶಾಸಕರು ರಾಜೀನಾಮೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next