Advertisement

ಡೆಲಿವರಿ ಏಜೆಂಟ್ ನನ್ನು ಅಡ್ಡಗಟ್ಟಿ ಲಕ್ಷಾಂತರ ರೂ ದೋಚಿದ ಬಂದೂಕುಧಾರಿಗಳು; ವಿಡಿಯೋ ನೋಡಿ

04:36 PM Jun 26, 2023 | Team Udayavani |

ಹೊಸದಿಲ್ಲಿ: ಕಾರಿನಲ್ಲಿ ಹೋಗುತ್ತಿದ್ದ ಡೆಲಿವರಿ ಏಜೆಂಟ್ ಮತ್ತು ಆತನ ಸಹಚರನನ್ನು ಅಡ್ಡಗಟ್ಟಿದ ಬಂದೂಕುದಾರಿಗಳು ಎರಡು ಲಕ್ಷ ರೂ ದೋಚಿದ ಘಟನೆ ದಿಲ್ಲಿಯ ಪ್ರಗತಿ ಮೈದಾನ ಸುರಂಗ ಮಾರ್ಗದಲ್ಲಿ ನಡೆದಿದೆ.

Advertisement

ಹಣ ಕಳೆದುಕೊಂಡ ಅವರಿಬ್ಬರು ಹಣ ತಲುಪಿಸಲು ಕ್ಯಾಬ್‌ ನಲ್ಲಿ ಗುರುಗ್ರಾಮ್ ಕಡೆಗೆ ಹೋಗುತ್ತಿದ್ದಾಗ ಪ್ರಗತಿ ಮೈದಾನದ ಸುರಂಗದೊಳಗೆ ಆಘಾತಕಾರಿ ಘಟನೆ ಶನಿವಾರ ನಡೆದಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಜೂನ್ 24 ರಂದು ಪ್ರಗತಿ ಮೈದಾನದ ಸುರಂಗದೊಳಗೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಡೆಲಿವರಿ ಏಜೆಂಟ್ ಮತ್ತು ಅವರ ಸಹಚರರಿಂದ ಬಂದೂಕು ತೋರಿಸಿ 1.5 ರಿಂದ 2 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

1.5 ಕಿಮೀ ಸುರಂಗವು ನವದೆಹಲಿಯನ್ನು ಸರೈ ಕಾಲೇ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುತ್ತದೆ. ಸಂತ್ರಸ್ತರ ದೂರಿನ ನಂತರ, ಐಪಿಸಿ ಸೆಕ್ಷನ್ 397 (ದರೋಡೆ ಅಥವಾ ಸಾವು ಅಥವಾ ಘೋರವಾದ ಗಾಯವನ್ನು ಉಂಟುಮಾಡುವ ಪ್ರಯತ್ನದೊಂದಿಗೆ ಡಕಾಯಿತಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರಂಗದಲ್ಲಿ ಅಳವಡಿಸಲಾದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ದರೋಡೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ಓಲಾ ಕ್ಯಾಬನ್ನು ತಡೆದು ನಿಲ್ಲಿಸಿದ್ದಾರೆ. ಕಾರನ್ನು ಕೆಂಪು ಕೋಟೆ ಪ್ರದೇಶದಲ್ಲಿ ಡೆಲಿವರಿ ಏಜೆಂಟ್ ಬುಕ್ ಮಾಡಿದ್ದರು. ಅದು ಸುರಂಗವನ್ನು ಪ್ರವೇಶಿಸುತ್ತಿದ್ದಂತೆ ಶಸ್ತ್ರಸಜ್ಜಿತ ದರೋಡೆಕೋರರು ಬೈಕ್‌ ಗಳಲ್ಲಿ ಬಂದು ಇಳಿಯುತ್ತಾರೆ. ಅವರಲ್ಲಿ ಒಬ್ಬರು ಕ್ಯಾಬ್‌ ನಲ್ಲಿರುವ ಇಬ್ಬರು ವ್ಯಕ್ತಿಗಳತ್ತ ಗನ್ ತೋರಿಸುತ್ತಿರುವುದು ಕಂಡುಬಂದರೆ, ಮತ್ತೊಬ್ಬರು ಹಿಂದಿನ ಸೀಟಿನಿಂದ ನಗದು ಚೀಲವನ್ನು ಸಂಗ್ರಹಿಸುವುದು ಸೆರೆಯಾಗಿದೆ.

Advertisement

https://www.instagram.com/reel/Ct8vyThNXq8/?utm_source=ig_web_copy_link&igshid=MTI1ZDU5ODQ3Yw==

Advertisement

Udayavani is now on Telegram. Click here to join our channel and stay updated with the latest news.

Next