Advertisement

ತೆಪ್ಪ ಮುಳುಗಿ ಮೀನುಗಾರಿಕೆಗೆ ಹೋಗಿದ್ದ ಅಣ್ಣ-ತಮ್ಮ ನಾಪತ್ತೆ : ರಕ್ಷಣಾ ತಂಡದಿಂದ ಶೋಧ ಕಾರ್ಯ

05:56 PM Apr 20, 2022 | Team Udayavani |

ವಿಜಯಪುರ: ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಇಬ್ಬರು ಮೀನುಗಾರ ಅಣ್ಣ-ತಮ್ಮ ನಾಪತ್ತೆಯಾದ ಘಟನೆ ವರದಿಯಾಗಿದೆ.

Advertisement

ಮಂಗಳವಾರ ಸಂಜೆಯೇ ಘಟನೆ ಜರುಗಿದ್ದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬುಧವಾರ ಬೆಳಿಗ್ಗೆ ಶೋಧ ಕಾರ್ಯ ಆರಂಭಗೊಂಡಿದೆ.

ಮಂಗಳವಾರ ಸಂಜೆ ಜೋರಾಗಿ ಗಾಳಿ ಬೀಸಿದ್ದರಿಂದ ಇಬ್ಬರು ಮೀನುಗಾರಿದ್ದ ತೆಪ್ಪ ನದಿ ನೀರಲ್ಲಿ ಮಗುಚಿಕೊಂಡಿದೆ.

ಪರಿಣಾಮ‌ ತೆಪ್ಪದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬಳೂತಿ ಗ್ರಾಮದ ಮಳಿಯಪ್ಪ ದಳವಾಯಿ ಇವರ ಪುತ್ರರಾದ 24 ವರ್ಷದ ಬಸವರಾಜ, 20 ವರ್ಷದ ಅಜಿತ್ ಎಂದು ಗುರುತಿಸಲಾಗಿದೆ. ಈ ಮೀನುಗಾರ ಇಬ್ಬರು ಸಹೋದರರು ಕೃಷ್ಣಾ ನದಿ ನೀರಲ್ಲಿ ಮುಳಗುಗಿ ನಾಪತ್ತೆಯಾಗಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ತೆರಳಿರುವ ಅಗ್ನಿಶಾಮಕ ಸೇವೆ ಸಿಬ್ಬಂದಿ ಪೊಲೀಸರು ಹಾಗೂ ನುರಿತ ಸ್ಥಳೀಯ ಮೀನುಗಾರರೊಂದಿಗೆ ನಾಪತ್ತೆಯಾದ ಮೀನುಗಾರರ ಶೋಧದಲ್ಲಿ ತೊಡಗಿದ್ದಾರೆ.

Advertisement

ಇದನ್ನೂ ಓದಿ : ಪ್ರಶ್ನೆಗಳಿಗೆ ಉತ್ತರ ಕೊಡಿ, ಉದ್ದರಿ ಉಪದೇಶ ನಿಲ್ಲಿಸಿ: ಸಿದ್ದರಾಮಯ್ಯಗೆ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next