Advertisement

ತಂದೆಯನ್ನು ಕಡಿದು ಕೊಂದ ಸಹೋದರರಿಗೆ ಜೀವಾವಧಿ ಜೈಲು ಶಿಕ್ಷೆ

05:00 PM Jun 02, 2018 | udayavani editorial |

ನವಾಡಾ, ಬಿಹಾರ : 2016ರಲ್ಲಿ  ಭೂ ವಿವಾದಕ್ಕೆ ಸಂಬಂಧಿಸಿ ತಮ್ಮ ತಂದೆಯನ್ನು ಕೊಂದಿದ್ದ ಇಬ್ಬರು ಸಹೋದರರಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

Advertisement

ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶ ರುದ್ರ ಪ್ರಕಾಶ್‌ ಮಿಶ್ರಾ ಅವರು ಆರೋಪಿಗಳಾದ ಧನೇಶ್ವರ ಯಾದವ್‌ ಮತ್ತು ಕುಲದೀಪ್‌ ಯಾದವ್‌ ಅವರು ತಮ್ಮ ತಂದೆಯನ್ನು ಕೊಂದ ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಜೈಲು ಶಿಕ್ಷೆ ವಿಧಿಸಿದರು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮೊಹಮ್ಮದ್‌ ಶಂಸುದ್ದೀನ್‌ ಖಾನ್‌ ತಿಳಿಸಿದರು. 

ನ್ಯಾಯಾಧೀಶರು ಇಬ್ಬರೂ ಅಪರಾಧಿಗಳಿಗೆ ತಲಾ 15,000 ರೂ. ದಂಡ ವಿಧಿಸಿದರು. ಧನೇಶ್ವರ್‌ ಮತ್ತು ಕುಲದೀಪ್‌ ಅವರು 2016ರ ಮಾಚ್‌ರ 3ರಂದು 70ರ ಹರೆಯದ ತಮ್ಮ ತಂದೆಯನ್ನು ಕೊಡಲಿ ಎಂದು ಕಡಿದು ಸಾಯಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next