Advertisement

ಈಜಲು ಹೋದ ಇಬ್ಬರು ಬಾಲಕರ ಸಾವು

10:19 PM May 05, 2021 | Team Udayavani |

ಕೊಪ್ಪಳ : ಈಜಲು ಹೋದ ಇಬ್ಬರು ಬಾಲಕರು ನೀರು ಪಾಲದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕೆರೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆಸಿದ್ದು, ಗ್ರಾಮದ ಪಕ್ಕದಲ್ಲಿರುವ  ಕೆರೆಯಲ್ಲಿ ಇಬ್ಬರು ಬಾಲಕರು ಈಜಲು ಹೋಗಿದ್ದರು.

Advertisement

11 ವರ್ಷದ ಕಿಶೋರ್ ಶಂಕ್ರಪ್ಪ ಶಿಳ್ಳೆಕ್ಯಾತರ್, 10 ವರ್ಷದ ಗವಿಸಿದ್ದಪ್ಪ ಗುರುರಾಜ್ ಬೋವಿ ಮೃತ ದುರ್ದೈವಿಗಳಾಗಿದ್ದು, ಮಧ್ಯಾಹ್ನ ವೇಳೆ ಈ ಘಟನೆ ನಡೆದಿದೆ. ಸಂಜೆಯಾದರೂ ಮಕ್ಕಳು ಮನೆಗೆ ಬಾರದನ್ನು ತಿಳಿದ ಪೋಷಕರು ಇತರ ಮಕ್ಕಳನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ :ನಾಳೆಯಿಂದ ದಿನಕ್ಕೆ 20,000 ರೆಮಿಡಿಸಿವರ್‌ ಡೋಸ್‌ ಪೂರೈಕೆಗೆ ತಯಾರಕರ ಸಮ್ಮತಿ:ಅಶ್ವತ್ಥನಾರಾಯಣ

ಗ್ರಾಮಸ್ಥರು ಶವ ಹೊರ ತೆಗೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next