Advertisement

ಕಾಲುವೆಗೆ ಬಿದ್ದ ಇಬ್ಬರು ಬಾಲಕರು: ಓರ್ವ ಸಾವು, ಮತ್ತೊಬ್ಬ ನಾಪತ್ತೆ

01:00 PM Feb 13, 2021 | Team Udayavani |

ರಾಯಚೂರು: ತಾಲೂಕಿನ ರಾಮನಗರ ಕ್ಯಾಂಪ್ ನಲ್ಲಿ ಟಿಎಲ್ ಬಿಸಿ ಕಾಲುವೆಗೆ ಬಿದ್ದು ಬಾಲಕನೋರ್ವ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಕಾಣೆಯಾಗಿದ್ದಾನೆ.

Advertisement

ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಪ್ರವೀಣ (10) ಶವವಾಗಿ ಪತ್ತೆಯಾದರೆ, ಚಿನ್ನು (10) ನಾಪತ್ತೆಯಾಗಿದ್ದಾನೆ. ಈತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಶಾಲೆ ಆರಂಭವಾಗದ ಕಾರಣ ಶುಕ್ರವಾರ ಮಧ್ಯಾಹ್ನ ಆಡಲು ಕಾಲುವೆಗೆ ತೆರಳಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ:ಪ್ರೇಮಿಗಳ ದಿನದಂದು ಅಹಿತಕರ ಘಟನೆಗೆ ಆಸ್ಪದವಾಗದಂತೆ ಅಗತ್ಯ ಕ್ರಮ: ಮಂಗಳೂರು ಡಿಸಿಪಿ

ಇಡಪನೂರು ಠಾಣೆಯಲ್ಲಿ ಪ್ರಕರಣ ಕಾಣೆ ಪ್ರಕರಣ ದಾಖಲಾಗಿತ್ತು. ಅಗ್ನಿ ಶಾಮಕ ಸಿಬ್ಬಂದಿ ನೆರವಿನೊಂದಿಗೆ ಶೋಧ ಕಾರ್ಯ ಕೈಗೊಂಡಿದ್ದು, ಇನ್ನೊಬ್ಬ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Advertisement

ಇದನ್ನೂ ಓದಿ: ಕಂಟೈನರ್ ಗೆ ಕಾರು ಢಿಕ್ಕಿ: ಕಾರಿನಲ್ಲಿದ್ದ ಬೆಂಗಳೂರು ಮೂಲದ ನಾಲ್ವರು ಯುವಕರು ಸಾವು

Advertisement

Udayavani is now on Telegram. Click here to join our channel and stay updated with the latest news.

Next