Advertisement

Kaveri ನದಿಯಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದಇಬ್ಬರ ಬಂಧನ

10:39 PM Jan 13, 2024 | Team Udayavani |

ಕೊಳ್ಳೇಗಾಲ: ತಾಲ್ಲೂಕಿನ ಜಾಗೇರಿ ಗ್ರಾಮದ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದಇಬ್ಬರು ಆರೋಪಿಗಳನ್ನು ಬಫರ್ ವಲಯದ ಅರಣ್ಯ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

Advertisement

ಜಾಗೇರಿ ಗ್ರಾಮದ ಸಮೀಪವಿರುವ ಶಿಲುವೈ ಪುರದ ನಿವಾಸಿ ಜಪಮಾಲೆ ಮತ್ತು ಪಾಸ್ಕಲ್ ಗ್ರಾಮದ ಪಾಲ್ ರಾಜ್ ಬಂಧಿತ ಆರೋಪಿಗಳು.

ಆರೋಪಿಗಳು ಪ್ರತಿನಿತ್ಯ ಅಕ್ರಮವಾಗಿ ಕಾಡಿನೊಳಗೆ ಪ್ರವೇಶ ಮಾಡಿ ಕಾವೇರಿ ನದಿಯಲ್ಲಿ ಮೀನು ಹಿಡಿಯುತ್ತಿದ್ದರು.ನಿತ್ಯ 300 ರಿಂದ 400 ಕೆಜಿ ಅಕ್ರಮವಾಗಿ ಮೀನುಗಳನ್ನು ಕಾವೇರಿ ನದಿಯಿಂದ ಹಿಡಿದು ಮಾರಾಟ ಮಾಡುವ ದಂಧೆಯ ಬಗ್ಗೆ ಮಾಹಿತಿ ಅರಿತ ಅರಣ್ಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, ಅವರ ಬಿಳಿ ಇದ್ದ 40 ಕೆ.ಜಿ. ಮೀನು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Kollegala: ಪಡಿತರ ಅಕ್ಕಿ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಿಸುತ್ತಿದ್ದವನ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next