Advertisement

21 ರೈತರಿಂದ ಜಮೀನ್‌ ಸಮಾಧಿ ಸತ್ಯಾಗ್ರಹ

11:38 AM Mar 02, 2020 | Hari Prasad |

ಜೈಪುರ: ಐವರು ಮಹಿಳೆಯರೂ ಸೇರಿ 21 ರೈತರು ತಮ್ಮನ್ನು ತಾವು ಕುತ್ತಿಗೆ ವರೆಗೂ ನೆಲದಲ್ಲಿ ಹೂತುಕೊಂಡು ‘ಜಮೀನ್‌ ಸಮಾಧಿ ಸತ್ಯಾಗ್ರಹ’ ಆರಂಭಿಸಿರುವ ಘಟನೆ ರಾಜಸ್ಥಾನದ ನಿಂದಾರ್‌ ಗ್ರಾಮದಲ್ಲಿ ನಡೆದಿದೆ. ಜೈಪುರ ಅಭಿವೃದ್ಧಿ ಪ್ರಾಧಿಕಾರವು ವಸತಿ ಯೋಜನೆಗಾಗಿ ರೈತರ ಭೂಮಿಯನ್ನು ವಶಕ್ಕೆ ಪಡೆದಿದೆ.

Advertisement

ಆದರೆ, ಪ್ರಾಧಿಕಾರ ತಮ್ಮ ಭೂಮಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಪ್ರಸ್ತುತ ವಶಕ್ಕೆ ಪಡೆದಿರುವ ಜಮೀನಿಗೆ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಅನ್ವಯ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next