Advertisement

ಗದ್ದುಗೆಯಲ್ಲಿ ಕ್ರಿಯಾಸಮಾಧಿ ವಿಧಾನ ಶುರು; 4ಗಂಟೆವರೆಗೂ ಅಂತಿಮ ದರ್ಶನ

06:59 AM Jan 22, 2019 | Sharanya Alva |

ತುಮಕೂರು: ಶಿವೈಕ್ಯರಾದ ತುಮಕೂರು ಸಿದ್ದಗಂಗಾಶ್ರೀಗಳ(111ವರ್ಷ) ಲಿಂಗಶರೀರದ ಕ್ರಿಯಾ ಸಮಾಧಿ ವಿಧಿ ವಿಧಾನ ಆರಂಭಗೊಂಡಿದೆ. ಸೋಮವಾರ ಸಂಜೆ 4ಗಂಟೆ ನಂತರ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ.

Advertisement

ಹಳೆ ಮಠದಲ್ಲಿ ಉದ್ದಾನ ಶಿವಯೋಗಿಗಳ ಗದ್ದುಗೆ ಪಕ್ಕದಲ್ಲೇ ಶ್ರೀಗಳ ಕ್ರಿಯಾ ಸಮಾಧಿಗೆ ಸುಮಾರು 20ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ವಿಧಿವಿಧಾನ ಆರಂಭಗೊಂಡಿದೆ.

ಮತ್ತೊಂದೆಡೆ ತುಮಕೂರು ಸಿದ್ದಗಂಗಾಮಠದತ್ತ ಲಕ್ಷಾಂತರ ಭಕ್ತರು ಹರಿದು ಬಡತೊಡಗಿದ್ದು, ಈ ಹಿನ್ನೆಲೆಯಲ್ಲಿ ಸಂಜೆ 6ಗಂಟೆವರೆಗೂ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಆ ಬಳಿಕವೇ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ.

ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಭಕ್ತರು ಕೂಡಾ ಸಹಕರಿಸಬೇಕು. ಕ್ರಿಯಾ ವಿಧಿವಿಧಾನವನ್ನು ಎಲ್ ಇಡಿ ಪರದೆ ಮೇಲೆ ತೋರಿಸಲಾಗುತ್ತದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next