Advertisement

Tumkur ಕೆಎಸ್ಆರ್’ಟಿಸಿ ಬಸ್ ನಿಲ್ದಾಣಾಧಿಕಾರಿ ಅಮಾನತು; ಲಂಚ ಪಡೆಯುತ್ತಿರುವ ವಿಡಿಯೋ ವೈರಲ್

01:33 PM Dec 31, 2023 | Team Udayavani |

ತುಮಕೂರು: ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಹಿನ್ನೆಲೆ ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣಾಧಿಕಾರಿ ಕೆ. ಶಿವಕುಮಾರ್’ ಅಮಾನತುಗೊಂಡಿದ್ದಾರೆ.

Advertisement

ಅಧಿಕಾರಿ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ.

ಕೆ.ಎಸ್.ಆರ್.ಟಿ.ಸಿ. ನಿಲ್ದಾಣಾಧಿಕಾರಿ ಕೆ. ಶಿವಕುಮಾರ್ ಬಸ್ ನಿಲ್ದಾಣದಲ್ಲಿ ಸೌತೆಕಾಯಿ, ಕೀ ಬಂಚ್ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುವ ಹುಡುಗರಿಂದ ಪ್ರತಿ‌ ದಿನ ತಲಾ 200 ರೂ.ಗಳಂತೆ ವಸೂಲಿ ಮಾಡುತ್ತಿದ್ದರು ಎನ್ನುವುದು ವಿಡಿಯೋದಲ್ಲಿ ಬಹಿರಂಗವಾಗಿದೆ.

ಸ್ವತಃ ಕೆ. ಶಿವಕುಮಾರ್ ಲೆಕ್ಕ ಹಾಕಿ ಲಂಚದ ಹಣ ಪಡೆಯುತ್ತಿರುವ ವಿಡಿಯೋ ಇದಾಗಿದ್ದು, ಈ ವಿಡಿಯೋ ಆಧರಿಸಿ ಸಾರ್ವಜನಿಕರು ನಿಗಮದ ಹಿರಿಯ‌ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಿಲ್ದಾಣಾಧಿಕಾರಿ ಕೆ. ಶಿವಕುಮಾರ್ ‌ಅವರನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next