Advertisement

ಗಿನ್ನೆಸ್‌ ದಾಖಲೆಯತ್ತ ತುಳು ಸಿನೆಮಾ ರಂಗ: ಭಂಡಾರಿ

05:15 PM Jun 24, 2018 | |

ಮುಂಬಯಿ:  ತೌಳವರು ಎಲ್ಲರೂ ಒಂದೆನ್ನುವ ಒಗ್ಗಟ್ಟು ಸಿನೆಮಾ ಮುಖೇನ ತೋರ್ಪಡಿಸುವ ಉದ್ದೇಶ ಈ ಚಲನಚಿತ್ರ ನಿರ್ಮಾಣದ್ದಾಗಿದೆ.  ಅದರಲ್ಲೂ ಸರ್ವ ಕಲಾವಿದರ ಪ್ರತಿಭೆಗಳನ್ನು ಒಂದೇ ವೇದಿಕೆ ಯಡಿಯಲ್ಲಿ ಪ್ರದರ್ಶಿಸುವ ಕಾರ್ಯ ಇದಾಗಿದೆ. ತುಳುವಿನ ಒಗ್ಗಟ್ಟು ಪ್ರದರ್ಶನಕ್ಕೆ ಹೊಸ ವೇದಿಕೆಯೊಂದು ಸಿದ್ಧಗೊಂಡಿದ್ದು, ರಂಗ ಸಂಘಟನೆ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಜಾಗತಿಕ ವಾಗಿ ಪಸರಿಸುವ ಉದ್ದೇಶವೂ ನಮ್ಮದಾಗಿದೆ. ತುಳುನಾಡಿನ ಸಮಗ್ರ ಜನತೆ ಸ್ವೀಕರಿಸುವಂತಹ ಸಿನೆಮಾ ವಾಗಿ ಈ ಚಿತ್ರ ಮೂಡಿ ಬರುವ ಆಶಯ ನಮ್ಮದಾಗಿದೆ ಎಂದು ನಾಗೇಶ್ವರ ಸಿನಿ ಕಂಬೈನ್ಸ್‌  ಸಂಸ್ಥೆಯ ಆಡಳಿತ ನಿರ್ದೇಶಕ, ಅಂಬರ್‌ ಕ್ಯಾಟರರ್ ಸಿನೆಮಾ ನಿರ್ಮಾಪಕ, ಮುಂಬಯಿ ಉದ್ಯಮಿ  ಕಡಂದಲೆ ಸುರೇಶ್‌ ಭಂಡಾರಿ ತಿಳಿಸಿದರು.

Advertisement

ನಾಗೇಶ್ವರ ಸಿನಿ ಕಂಬೈನ್ಸ್‌ ಸಂಸ್ಥೆಯ ಬ್ಯಾನರ್‌ ಅಡಿಯಲ್ಲಿ  ತಮ್ಮ ನಿರ್ಮಾಪಕತ್ವದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಅಪರೂಪದ ಹಾಗೂ ಗಿನ್ನೆಸ್‌ ದಾಖಲೆಗೆ ಪಾತ್ರವಾಗುವ ನೂತನ ತುಳು ಸಿನೆಮಾದ ನಿಮಿತ್ತ ಜೂ. 23ರಂದು ಪೂರ್ವಾಹ್ನ ಮಂಗಳೂರು ವುಡ್‌ಲ್ಯಾಂಡ್ಸ್‌ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಇದೊಂದು ತುಳುಚಿತ್ರ ರಂಗದಲ್ಲಿ ಅಪರೂಪದ ದಾಖಲೆಯಾಗಿ ಉಳಿಯಲಿದ್ದು, ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.

ನಾಗೇಶ್ವರ ಸಿನಿ ಕಂಬೈನ್ಸ್‌ ಅಂಬರ್‌ ಕ್ಯಾಟರರ್ ಎಂಬ ಚಿತ್ರವನ್ನು ನಿರ್ಮಿಸಿ ಭರ್ಜರಿ ಪ್ರದರ್ಶನದೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ದ್ವಿತೀಯ ಚಿತ್ರ ನಿರ್ಮಾಣವು ಸೆಪ್ಟಂಬರ್‌ನಲ್ಲಿ ಸೆಟ್ಟೇರಲಿದೆ. ಹರೀಶ್‌ ಕೊಟಾ³ಡಿ ಅವರ ಕಥೆ-ಚಿತ್ರಕಥೆ, ಸಂಭಾಷಣೆ ಮತ್ತು ಸಂಕಲನದಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಈ ತುಳುಚಿತ್ರವನ್ನು ಗಿನ್ನೆಸ್‌ ದಾಖಲೆಗೆ ಕೊಂಡೊಯ್ಯುವ ದೃಷ್ಟಿ ಯನ್ನಿಟ್ಟುಕೊಂಡು 17 ಗಂಟೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ.  10 ತುಳು ಚಿತ್ರರಂಗದ ಯಶಸ್ವಿ ಚಿತ್ರ ನೀಡಿದ ನಿರ್ದೇಶಕರು ಈ ಚಿತ್ರವನ್ನು ಏಕಕಾಲದಲ್ಲಿ 17 ಗಂಟೆಯ ಕಾಲ ನಿರ್ದೇಶಿಸಲಿದ್ದು, 10 ನಾಯಕ ನಟರು ಅಭಿನಯಿಸಲಿದ್ದಾರೆ.  ತುಳುವಿನ ಪ್ರಥಮ ಮಲ್ಟಿàಸ್ಟಾರ್‌ ಚಿತ್ರ ಇದಾಗಲಿದ್ದು, 10ಕ್ಕಿಂತಲೂ ಹೆಚ್ಚಿನ ಕೆಮರಾ ಬಳಕೆಯಾಗಲಿದೆ. 10ಕ್ಕಿಂತಲೂ ಮಿಕ್ಕಿದ ಲೊಕೇಶನ್‌ನಲ್ಲಿ ಚಿತ್ರೀಕರಿಸುವ ಯೋಜನೆ ಹಾಕಲಾಗಿದ್ದು, ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದ ಹೆಚ್ಚಿನ ನಟ-ನಟಿಯರು ಅಭಿನಯಿಸಲಿದ್ದಾರೆ. ವಿಭಿನ್ನ ಕಥಾ ಹಂದರವನ್ನು ಚಿತ್ರವು ಹೊಂದಿದೆ ಎಂದು ನಾಗೇಶ್ವರ ಸಿನಿ ಕಂಬೈನ್ಸ್‌ ನ ನಿರ್ದೇಶಕ, ನಟ ಸೌರಭ್‌ ಎಸ್‌. ಭಂಡಾರಿ ಅವರು  ನೂತನ ಚಿತ್ರದ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.

ಪ್ರಸಿದ್ಧ ನಿರ್ದೇಶಕರಾದ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ತೆಲಿಕೆದ ಬೊಳ್ಳಿ  ದೇವದಾಸ್‌ ಕಾಪಿಕಾಡ್‌, ಪ್ರಕಾಶ್‌ ಪಾಂಡೇಶ್ವರ್‌, ಮಯೂರ್‌ ಶೆಟ್ಟಿ, ರಂಜಿತ್‌ ಸುವರ್ಣ, ರಾಜ್‌ ಕಮಲ್‌, ರಿತೇಶ್‌ ಬಂಗೇರ, ರಘು ಶೆಟ್ಟಿ ಮೊದಲಾದ ನಿರ್ದೇಶಕರು ಚಿತ್ರವನ್ನು  ನಿರ್ದೇಶಿಸಲಿದ್ದು, ತುಳುನಾಡ ಚಕ್ರವರ್ತಿ ಅರ್ಜುನ್‌ ಕಾಪಿಕಾಡ್‌, ತೌಳವ ಸ್ಟಾರ್‌ ಸೌರಭ್‌ ಭಂಡಾರಿ, ರೂಪೇಶ್‌ ಶೆಟ್ಟಿ, ಪೃಥ್ವಿ ಅಂಬರ್‌, ಅಸ್ತಿಕ್‌ ಶೆಟ್ಟಿ, ನಾಯಕನಟರಾಗಿ ಅಭಿನಯಿಸಲಿದ್ದಾರೆ.

ಹೆಸರಾಂತ ಹಾಸ್ಯ ನಟರ ಸಮಾಗಮದೊಂದಿಗೆ ತಮಿಳು ಚಿತ್ರರಂಗದ ಧನುಷ್‌ ಅವರ ಪುಲಿಕುಟ್ಟಿ ಚಿತ್ರ ಖ್ಯಾತಿಯ ಸುಮಾರು 40 ಚಿತ್ರಗಳಲ್ಲಿ ಖಳನಾಯಕನಾಗಿ ಮಿಂಚಿದ ತಮಿಳು  ಚಿತ್ರನಟ ರಾಜುಸಿಂಹ ಹಾಗೂ ಚೇತನ್‌ ರೈ ಮಾಣಿ ಖಳ ನಾಯಕನ ಪಾತ್ರ ನಿರ್ವಹಿಸಲಿದ್ದಾರೆ. ಉಳಿದ ಅನೇಕ ನಿರ್ದೇಶಕರ ಹಾಗೂ ನಾಯಕ ನಟರ  ಮತ್ತು ಚಿತ್ರದ ಶೀರ್ಷಿಕೆಯ ವಿವರವನ್ನು ಶೀಘ್ರದಲ್ಲಿ ನೀಡಲಿದ್ದಾರೆ ಎಂದೂ ಸೌರಭ್‌ ಭಂಡಾರಿ ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಧವ ಭಂಡಾರಿ ಕುಳೂರು, ಪಮ್ಮಿ ಕೊಡಿಯಾಲ್‌ಬೈಲ್‌, ರಾಜೇಶ್‌ ಬ್ರಹ್ಮವಾರ, ಪ್ರಕಾಶ್‌ ಪಾಂಡೇಶ್ವರ್‌, ಕೆ. ಅಶೋಕ್‌, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ರಂಜಿತ್‌ ಸುವರ್ಣ, ಇಸ್ಮಾಯಿಲ್‌ ಮೂಡುಶೆಡ್ಡೆ, ಆದಿನಾಥ್‌ ಶೆಟ್ಟಿ, ಅರ್ಜುನ್‌ ಕಾಪಿಕಾಡ್‌, ಪೂಜಾ ಶೆಟ್ಟಿ, ಎಸ್‌. ಮಹೀರಾಜ್‌ ಮತ್ತಿತರರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next