Advertisement

ಶಬರಿಮಲೆಯಲ್ಲೂ ಭಕ್ತರಿಗೆ ತಿರುಪತಿ ಮಾದರಿ ವ್ಯವಸ್ಥೆ

01:34 PM Jan 17, 2018 | Team Udayavani |

ತಿರುವನಂತಪುರಂ: ಆಂಧ್ರಪ್ರದೇಶದಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕಲ್ಪಿಸಲಾಗುವ ಸೌಲಭ್ಯಗಳ ಮಾದರಿಯಲ್ಲೇ ಶಬರಿಮಲೆ ದೇವಸ್ಥಾನಕ್ಕೆ ಆಗಮಿಸುವ ಯಾತ್ರಿಕರಿಗೂ ಸೌಲಭ್ಯಗಳನ್ನು ಒದಗಿಸಲು ಕೇರಳ ಸರ್ಕಾರ ಮುಂದಾಗಿದೆ.  

Advertisement

ಅದಕ್ಕಾಗಿ ಆದಷ್ಟು ಬೇಗ ತಿರುಪತಿಗೆ ತಜ್ಞರ ತಂಡವನ್ನು ಕಳುಹಿಸಿ, ಅಲ್ಲಿಯ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಬರಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನಿರ್ದೇಶನ ನೀಡಿದ್ದಾರೆ ಎಂದು ದೇವಸ್ವಂ ಮತ್ತು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ತಿಳಿಸಿದ್ದಾರೆ. ಅಯ್ಯಪ್ಪ ಸ್ವಾಮಿ ದೇವಾಲಯ ವರ್ಷದಲ್ಲಿ ಮೂರೇ ತಿಂಗಳು ತೆರೆದಿರುತ್ತದೆ. ಆಗ ಲಕ್ಷಾಂತರ ಜನರು ಇಲ್ಲಿಗೆ ಒಮ್ಮೆಲೇ ಆಗಮಿಸುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next