Advertisement

Siddapura: ಮೈಮೇಲೆ ಬೈಕ್‌ ಹತ್ತಿಸಲು ಯತ್ನ; ಹಲ್ಲೆ

08:34 PM Jun 08, 2024 | Team Udayavani |

ಸಿದ್ದಾಪುರ: ಸಿದ್ದಾಪುರ ಪೇಟೆಯ ಬಳಿಯ ಕ್ಯಾಂಟಿನ್‌ ಹತ್ತಿರ ಜೂ.6ರ ರಾತ್ರಿ 8.30ರ ಸಂದರ್ಭದಲ್ಲಿ ನಿಂತುಕೊಂಡಿರುವಾಗ ಬೈಕಿನಲ್ಲಿ ಬಂದ ಆರೋಪಿಗಳು ಮೈಮೇಲೆ ಬೈಕ್‌ ಹತ್ತಿಸಲು ಯತ್ನಿಸಿ, ಹಲ್ಲೆ ನಡೆಸಿದ್ದಾರೆ ಉಳ್ಳೂರು-74 ಗ್ರಾಮದ ಶರಣ್‌(22)ಅವರು ಪೊಲೀಸರಿಗೆ ದೂರು ನೀಡಿದರು.

Advertisement

ಆರೋಪಿಗಳಾದ ಗಣೇಶ್‌, ಮನೋಹರ, ನಾಗೇಂದ್ರ ಅವರು ಬೈಕ್‌ನಲ್ಲಿ ಬಂದು ಕ್ಯಾಂಟಿನ್‌ ಬಳಿ ನಿಂತಿರುವ ತನಗೂ ಹಾಗೂ ತಮ್ಮ ವಿಜಯ ಅವರ ಮೇಲೆ ಬೈಕ್‌ ಹತ್ತಿಸಲು ಯತ್ನಿಸಿದರು. ತಪ್ಪಿಸಿಕೊಂಡಾಗ ಹಲ್ಲೆ ಮಾಡಿದರು. ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೇದರಿಕೆ ಹಾಕಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಇಬ್ಬರು ಅಮಾಸೆಬೈಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next