Advertisement

Kasaragod: ಸರಿಯಾದ ದಾಖಲೆ ಪತ್ರಗಳಿಲ್ಲದ 15.50 ಲಕ್ಷ ರೂ. ವಶಕ್ಕೆ

07:05 PM Jun 08, 2024 | Team Udayavani |

ಕಾಸರಗೋಡು: ಸರಿಯಾದ ದಾಖಲೆ ಪತ್ರಗಳಿಲ್ಲದೆ ಸಾಗಿಸುತ್ತಿದ್ದ 15.50 ಲಕ್ಷ ರೂ. ವನ್ನು ವಿದ್ಯಾನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಈ ಸಂಬಂಧ ಉಳಿಯತ್ತಡ್ಕ ವರ್ಕತ್ತೋಡಿ ನಜಿಲ ಅಪಾರ್ಟ್‌ಮೆಂಟ್‌ನ ಲತೀಫ್‌ ಆಲಿಯಾಸ್‌ ಅಬ್ದುಲ್‌ ಲತೀಫ್‌ (42) ನನ್ನು ವಶಪಡಿಸಿಕೊಂಡು, ವಿಚಾರಣೆ ನಡೆಸಿದ ಬಳಿಕ ಬಿಡುಗಡೆಗೊಳಿಸಿದ್ದಾರೆ.

ವಶಪಡಿಸಿಕೊಂಡ ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಉಳಿಯತ್ತಡ್ಕ ಪೆಟ್ರೋಲ್‌ ಬಂಕ್‌ ಪರಿಸರದಲ್ಲಿ ವಿದ್ಯಾನಗರ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಈ ದಾರಿಯಾಗಿ ಬಂದ ಅಬ್ದುಲ್‌ ಲತೀಫ್‌ನನ್ನು ತಪಾಸಣೆ ಮಾಡಿದಾಗ ಕೈಯಲ್ಲಿದ್ದ ಪ್ಲಾಸ್ಟಿಕ್‌ ಕವರ್‌ನಲ್ಲಿ ಹಣ ಪತ್ತೆಯಾಯಿತು. ಇದೇ ವ್ಯಕ್ತಿಯಿಂದ ಎರಡು ತಿಂಗಳ ಹಿಂದೆಯೂ ಸರಿಯಾದ ದಾಖಲೆಗಳಿಲ್ಲದ ಸುಮಾರು 13.16 ಲಕ್ಷ ರೂ. ವನ್ನು ಪೊಲೀಸರು ವಶಪಡಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next