Advertisement

ಗಾಳಿ ಮಳೆಗೆ ಮರ ಉರುಳಿ ಬಿದ್ದು ಮನೆ ಜಖಂ

10:53 PM May 11, 2020 | Sriram |

ಕೊಲ್ಲೂರು: ಇಲ್ಲಿನ ಸುಬ್ಬರಸನ ತೊಪ್ಲು ಎಂಬಲ್ಲಿ ಮೇ 10ರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮರವೊಂದು ಬುಡ ಸಮೇತ ಮನೆಯ ಮೇಲೆ ಉರುಳಿ ಬಿದ್ದು ಮನೆ ಜಖಂ ಗೊಂಡಿದೆ.

Advertisement

ಇಲ್ಲಿನ ನಿವಾಸಿ ಬಾಬು ಭಂಡಾರಿ ಅವರ ಮನೆಯ ಸನಿ ಹದ ಭಾರೀ ಗಾತ್ರದ ಮರವೊಂದು ರವಿವಾರ ಬೀಸಿದ ಸುಂಟರ ಗಾಳಿಗೆ ಬುಡ ಸಮೇತ ಉರುಳಿ ಮನೆಯ ಮೇಲೆ ಬಿದ್ದು ಮನೆಯ ಮುಂಭಾಗವು ಸಂಪೂರ್ಣವಾಗಿ ಹಾನಿಗೊಂಡಿದೆ. ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಕೊಲ್ಲೂರು ಗ್ರಾಪಂ ಅಧ್ಯಕ್ಷ ಕೆ. ಪ್ರಕಾಶ್‌ ಪೂಜಾರಿ, ಗ್ರಾಮ ಲೆಕ್ಕಿಗ ವಿರೇಶ್‌ ಸ್ಥಳಕ್ಕೆ ಭೇಟಿಯಿತ್ತು ಉಂಟಾದ ನಷ್ಟದ ಪರಿಶೀಲನೆ ನಡೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next