Advertisement

ಪಾರ್ಕ್‌ನಲ್ಲಿ ಧರೆಗುರುಳಿದ ಬೃಹತ್ ಮರ: ಕಾರ್‌ಗಳು ಸಂಪೂರ್ಣ ಜಖಂ

01:55 PM Nov 12, 2021 | Team Udayavani |

ಮೈಸೂರು: ನಗರದ ರಾಜ್‌ಕುಮಾರ್ ಪಾರ್ಕ್‌ನಲ್ಲಿ ಮಳೆಯಿಂದಾಗಿ ಎರಡು ಬೃಹತ್ ಮರಗಳು ಧರೆಗುರುಳಿದ್ದು, ಎರಡು ಕಾರ್‌ಗಳು ಸಂಪೂರ್ಣ ಜಖಂಗೊಂಡ ಘಟನೆ ಶುಕ್ರವಾರ ನಡೆದಿದ್ದು, ಅದ್ರಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Advertisement

ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿ ಘಟನೆ ನಡೆದಿದ್ದು, ಬೃಹತ್ ಮರ ಉರುಳಿದ ಪರಿಣಾಮ ಎರಡು ಕಾರು, ಐದು ವಿದ್ಯುತ್ ಕಂಬಗಳು ಜಖಂಗೊಂಡಿವೆ.

ಸಂಪೂರ್ಣವಾಗಿ ರಸ್ತೆಗೆ ಮರ ಬಿದ್ದ ಪರಿಣಾಮ ಹರ್ಷ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಪಾಲಿಕೆ ಹಾಗೂ ಸೆಸ್ಕ್ ಸಿಬ್ಬಂದಿ ಮರವನ್ನು ತೆರವು ಮಾಡುತ್ತಿದ್ದಾರೆ.

Advertisement

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಸೈಕ್ಲೋನ್ ಎಫೆಕ್ಟ್ ಕಂಡು ಬಂದಿದ್ದು, ಸತತ ಮಳೆ ಬಿದ್ದ ಪರಿಣಾಮ ಅವಘಡ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next