Advertisement

ಕೊಯಿಲ: ಪರವಾನಿಗೆ ಇಲ್ಲದೇ ಮರಳು ಸಾಗಾಟ

09:39 PM Mar 30, 2024 | Team Udayavani |

ಕಡಬ: ಪರವಾನಿಗೆ ಇಲ್ಲದೇ ಕುಮಾರಧಾರಾ ನದಿಯಿಂದ ಮರಳು ಕಳವು ಮಾಡಿ ಸಾಗಿಸುತ್ತಿದ್ದ ಆರೋಪದಲ್ಲಿ ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ರೋಶನ್‌ (33)ನನ್ನು ಬಂಧಿಸಿರುವ ಕಡಬ ಪೊಲೀಸರು ಮರಳು ತುಂಬಿಸಿದ್ದ ಪಿಕಪ್‌ ವಾಹನ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಘಟನೆ ಮಾ. 30ರಂದು ಬೆಳಗ್ಗೆ ಕೊಯಿಲ ಗ್ರಾಮದ ಸುಣ್ಣಾಡಿಯಲ್ಲಿ ಕುಮಾರಧಾರಾ ನದಿಯಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಕಡಬ ಠಾಣಾ ಪಿಎಸ್‌ಐ ಅಭಿನಂದನ ಎಂ.ಎಸ್‌., ಎಚ್‌ಸಿ ಹರೀಶ್‌, ಕಾನ್‌ಸ್ಟೆಬಲ್‌ ಇಸಾಕ್‌ ದಾಳಿ ನಡೆಸಿದ ವೇಳೆ ರೋಶನ್‌ ಪರವಾನಿಗೆ ಇಲ್ಲದೇ ಮರಳು ತುಂಬಿಸುತ್ತಿರುವುದು ಕಂಡು ಬಂದಿದೆ.

ರೋಶನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಸ್ಥಳದಿಂದ 1 ಸಾವಿರ ರೂ. ಮೌಲ್ಯದ ಮರಳು, ಪಿಕಪ್‌ ವಾಹನ ಹಾಗೂ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ರೋಶನ್‌ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next