Advertisement

ಬೇಡಿಕೆ ಈಡೇರಿಕೆಗೆ ಆಗ್ರಹ : ಡಿಸಿಎಂ ಸವದಿಗೆ ಧಿಕ್ಕಾರ ಕೂಗಿ ಆಕ್ರೋಶ

06:36 PM Dec 11, 2020 | Suhan S |

ಬೆಳಗಾವಿ: ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೌಕರರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ನೀಲಿ ಪ್ರಿಯ ಲಕ್ಷ್ಮಣ ಸವದಿಗೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ನೌಕರರ ಮುಷ್ಕರವನ್ನು ಬೆಂಬಲಿಸಿದರು. ಕರವೇ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ ಅವರು ನೀಲಿ ಪ್ರಿಯ ಸವದಿಗೆ ಎಂದು ಘೋಷಣೆ ಕೂಗುತ್ತಿದ್ದಂತೆ ಕಾರ್ಯಕರ್ತರು ಹಾಗೂ ಪ್ರತಿಬಟನಾನಿರತ ನೌಕರರು ಧಿಕ್ಕಾರ ಎಂದು ಕೂಗಿದರು.

ಇದನ್ನೂ ಓದಿ : ಕೇಂದ್ರ v/s ರೈತರು: 6 ತಿಂಗಳ ರೇಷನ್ ಜತೆ ಮತ್ತೆ 50 ಸಾವಿರ ರೈತರು ದೆಹಲಿಯತ್ತ ಪ್ರಯಾಣ

ಹೊಟ್ಟೆ ಮೇಲೆ ಕಲ್ಲಿಟ್ಟುಕೊಂಡು ಆಕ್ರೋಶ: ಬಸ್ ನಿಲ್ದಾಣದಲ್ಲಿಯೇ ಮಧ್ಯಾಹ್ನದ ಊಟ ಸೇವಿಸಿದ ನೌಕರರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪುರುಷ ನೌಕರರು ಅರೆಬೆತ್ತಲೆಯಾಗಿ ಮೈಮೇಲೆ ಹಾಗೂ ತಲೆ ಮೇಲೆ ಕಲ್ಲು ಹೊತ್ತುಕೊಂಡು ಕುಳಿತು ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಚಾಲಕರು, ನಿರ್ವಾಹಕರು ಸೀಟಿ ಊದುತ್ತ ಪ್ರತಿಭಟನೆಗಿಳಿದು ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next