Advertisement

ಸಾರಿಗೆ ಚಾಲಕರು ಶ್ರೀಕೃಷ್ಣರಿದ್ದಂತೆ: ಶ್ರೀರಾಮುಲು

06:06 PM Mar 14, 2022 | Team Udayavani |

ಶಿರಹಟ್ಟಿ: ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಪರಮಾತ್ಮ ಸಾರಥಿಯಾಗಿದ್ದರು. ಅದೇ ರೀತಿ ಈ ಕಲಿಯುಗದಲ್ಲಿ ಎದುರಾದ ಕೋವೀಡ್‌ ನಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮ ಚಾಲಕರು ತಮ್ಮ ಜೀವನದ ಹಂಗುದೊರೆದು ಜನರ ಸೇವೆಗೈದು ಶ್ರೀಕೃಷ್ಣ ಪರಮಾತ್ಮರಾಗಿದ್ದಾರೆಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಪಟ್ಟಣದಲ್ಲಿ ನಿರ್ಮಾಣವಾಗಿರುವ ನೂತನ ಶಿರಹಟ್ಟಿ ಬಸ್‌ ಡಿಪೋ ಘಟಕದ ಉದ್ಘಾಟನೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬಂಗಾರ-ಬೆಳ್ಳಿ ಪದಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿ ಕುಟುಂಬ ಮತ್ತು ತಮ್ಮ ಜೀವದ ಹಂಗು ತೊರೆದು ದುಡಿದ ಚಾಲಕರ ಸೇವೆ ಮರೆಯಲು ಸಾಧ್ಯವಿಲ್ಲ. ಮುಷ್ಕರದಲ್ಲಿ ಅಮಾನತಾದ ನೌಕರರ ಪೈಕಿ ಕೆಲವರನ್ನು ಮರಳಿ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಚಾಲಕರ-ನಿರ್ವಾಹಕರ ವೇತನ ಪರಿಷ್ಕರಣೆ, ವಿವಿಧ ಬೇಡಿಕೆಗಳನ್ನು ಸಿಎಂ ಜತೆ ಮಾತನಾಡಿ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ಶಿರಹಟ್ಟಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಸಾರಿಗೆ ಬಸ್‌ ಡಿಪೋ ಘಟಕದ ಕನಸು ಇಂದು ನನಸಾಗಿದೆ. ಕೊರೊನಾದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ವಿಷಮವಾದ್ದರೂ ರಾಜ್ಯ ಅಭಿವೃದ್ಧಿಯಿಂದ ಹಿಂದೆ ಸರಿದಿಲ್ಲ. ಸಾರಿಗೆ ಇಲಾಖೆಯವರು ಈ ಬಾರಿ 2 ಸಾವಿರ ನೂತನ ಬಸ್‌ ಗಳಿಗೆ ಬೇಡಿಕೆ ಇಟ್ಟಿದ್ದು, ಇದರಲ್ಲಿ 1 ಸಾವಿರ ಬಸ್‌ ಕಲ್ಪಿಸಲು ಕ್ರಮ ಜರುಗಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅದರಲ್ಲಿ ನೂತನ ಬಸ್‌ ಡಿಪೋ ಘಟಕ ಸ್ಥಾಪನೆ, 100 ಬೆಡ್‌ ಆಸ್ಪತ್ರೆ, ಕೋರ್ಟ್‌, ನೀರಾವರಿ ಯೋಜನೆಗೆ 200 ಕೋಟಿ ರೂ. ಮಂಜೂರು, ತಾಲೂಕಿನ ಇಟಗಿ ಗ್ರಾಮದ ಹತ್ತಿರ 1 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಮತಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಮಾದರಿ ಮತಕ್ಷೇತ್ರವನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

ಈ ವೇಳೆ 15 ವರ್ಷ ಅಪಘಾತ ರಹಿತ ಚಾಲನೆ ಮಾಡಿದ 9 ವಿಭಾಗಗಳ 58 ಘಟಕಗಳ 125 ಚಾಲಕರಿಗೆ ಬಂಗಾರದ ಪದಕ, 5 ವರ್ಷ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ ನೀಡಿ ಸಚಿವ ಶ್ರೀ ರಾಮುಲು ಗೌರವಿಸಿದರು. ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ, ಕರ್ನಾಟಕ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ವಾ.ಕ.ರ.ಸಾ. ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ, ಪಪಂ ಅಧ್ಯಕ್ಷೆ ಗಂಗಮ್ಮ ಆಲೂರ, ಉಪಾಧಕ್ಷ ಇಸಾಕ ಆದ್ರಳ್ಳಿ, ತಾಲೂಕಿನ ಬಿಜೆಪಿ ಮುಖಂಡರು, ಸಾರಿಗೆ ಇಲಾಖೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾ ಧಿಕಾರಿಗಳು, ಶಿರಹಟ್ಟಿ ಜನತೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next