Advertisement

ಭಾರಿ ಮಳೆಗೆ: ಕಾರವಾರ ಪೆರ್ನೆಂ ಬಳಿ ಸುರಂಗದ ಗೋಡೆ ಕುಸಿದು ರೈಲು ಸಂಚಾರ ರದ್ದು

07:01 PM Aug 06, 2020 | sudhir |

ಮಂಗಳೂರು: ಭಾರಿ ಮಳೆಯಿಂದಾಗಿ ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಪೆರ್ನೆಂ ಬಳಿ ಸುರಂಗದ ಒಳಭಾಗದ ಗೋಡೆ ಕುಸಿದಿದ್ದು ರೈಲು ಸಂಚಾರ ರದ್ದುಪಡಿಸಲಾಗಿದೆ.

Advertisement

ಮದುರೆ ಹಾಗೂ ಪೆರ್ನೆಂ ಮಧ್ಯೆ ಈ ಘಟನೆ ಗುರುವಾರ ಮುಂಜಾನೆ ನಡೆದಿದ್ದು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲಎಂದು ತಿಳಿದುಬಂದಿದೆ ಘಟನಾ ಸ್ಥಳದಲ್ಲಿ ದುರಸ್ತಿ ಕಾರ್ಯವನ್ನು ನಡೆಯುತ್ತಿದೆ.

ಆ.5ರ ನಂ.02617 ಎರ್ನಾಕುಳಂ-ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಹಾಗೂ ಅದೇ ದಿನದ ನಂ.06346 ತಿರುವನಂತಪುರಂ ಸೆಂಟ್ರಲ್-ಲೋಕಮಾನ್ಯ ತಿಲಕ್ ವಿಶೇಷ ರೈಲನ್ನು ಮಡಗಾಂವ್-ಲೋಂಡ-ಮೀರಜ್-ಪುಣೆ-ಪನ್ವೇಲ್-ಕಲ್ಯಾಣ್ ಮೂಲಕ ಕಳುಹಿಸಲಾಗಿದೆ.

ಅದೇ ರೀತಿ ಆ.5ರ ನಂ.02432 ನವದೆಹಲಿ-ತಿರುವನಂತಪುರಂ ಸೆಂಟ್ರಲ್ ರಾಜಧಾನಿ ವಿಶೇಷ ಎಕ್ಸ್‌ಪ್ರೆಸ್, ನಂ.02618 ಹ.ನಿಜಾಮುದ್ದೀನ್-ಎರ್ನಾಕುಳಂ ಸೂಪರ್‌ಫಾಸ್ಟ್, ಗುರುವಾರದ ನಂ.06345 ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ರೈಲುಗಳನ್ನು ಪನ್ವೆಲ್-ಪುಣೆ-ಮೀರಜ್-ಲೋಂಡ-ಮಡಗಾಂವ್ ಮೂಲಕ ಕಳುಹಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 022-27587939, 10722. ಸಂಪರ್ಕಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next