Advertisement

ಕೊಂಕಣ ಮಾರ್ಗದಲ್ಲಿ ರೈಲು ಸಂಚಾರ ರದ್ದು

11:18 PM Aug 04, 2019 | Lakshmi GovindaRaj |

ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಕಣ ರೈಲ್ವೆ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಮಂಗಳೂರಿನಿಂದ ಕುರ್ಲಾಕ್ಕೆ ಹೋಗುವ ಮತ್ಸಗಂಧ ಎಕ್ಸ್‌ಪ್ರೆಸ್‌ (12620), ಕುರ್ಲಾದಿಂದ ಮಂಗಳೂರಿಗೆ ಬರಬೇಕಾದ ಮತ್ಸಗಂಧ ಎಕ್ಸ್‌ಪ್ರೆಸ್‌ (12619), ಮಂಗಳೂರು ಜಂಕ್ಷನ್‌ನಿಂದ ಮುಂಬೈ ಸಿಎಸ್‌ಎಂಟಿಗೆ ಹೋಗಬೇಕಾದ (12134) ರೈಲು, ಸಿಎಸ್‌ಎಂಟಿಯಿಂದ ಮಂಗಳೂರಿಗೆ ಬರಬೇಕಾದ ರೈಲು (12133), ಎರ್ನಾಕುಳಂನಿಂದ ಕುರ್ಲಾಕ್ಕೆ ಹೋಗಬೇಕಾದ ತುರಂತೋ ಎಕ್ಸ್‌ಪ್ರೆಸ್‌,

Advertisement

ಕೊಚ್ಚುವೇಲಿಯಿಂದ ಕುರ್ಲಾಕ್ಕೆ (22124) ಆ. 5ರಂದು ಹೋಗುವ ರೈಲು, ಎರ್ನಾಕುಳಂನಿಂದ ಪುಣೆಗೆ ಹೋಗುವ ಭಾನುವಾರ ರೈಲು (22150), ತಿರುವನಂತಪುರದಿಂದ ಕುರ್ಲಾಕ್ಕೆ (16346) ತೆರಳಬೇಕಾದ ರೈಲು, ಕುರ್ಲಾದಿಂದ ತಿರುವನಂತಪುರಕ್ಕೆ ಹೋಗುವ (16345) ನೇತ್ರಾವತಿ ಎಕ್ಸ್‌ಪ್ರೆಸ್‌, ಕೊಚ್ಚುವೆಲಿಯಿಂದ ಕುರ್ಲಾಕ್ಕೆ ಹೋಗುವ ರೈಲು (12202)ಗಳನ್ನು ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ಪ್ರಬಂಧಕಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next