Advertisement

ಟ್ರೈನ್‌18: ತಾಂತ್ರಿಕ ದೋಷ

12:30 AM Feb 17, 2019 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ಮರುದಿನವೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ದೆಹಲಿಯಿಂದ ವಾರಾಣಸಿಗೆ ಪ್ರಯಾಣಿಸುವ ವೇಳೆ ವೀಲ್‌ ಸ್ಕಿಡ್‌ ಆಗಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ರೈಲ್ವೆ ಅಧಿಕಾರಿ ಗಳು ಹೇಳಿದ್ದಾರೆ. ಇನ್ನೊಂದೆಡೆ ಬ್ರೇಕ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ಹೇಳಿದ್ದಾರೆ.

Advertisement

ಶನಿವಾರ ಬೆಳಗ್ಗೆ 6.30 ರ ಸುಮಾರಿಗೆ ತುಂಡ್ಲಾ ಜಂಕ್ಷನ್‌ನಿಂದ 15 ಕಿ.ಮೀ ದೂರದಲ್ಲಿ ರೈಲು ನಿಂತು ಹೋಗಿತ್ತು. ಉತ್ತರ ರೈಲ್ವೆ ಸಿಪಿಆರ್‌ಒ ದೀಪಕ್‌ ಕುಮಾರ್‌ ಹೇಳುವಂತೆ ಜಾನುವಾರಿಗೆ ರೈಲು ಗುದ್ದಿದ ಪರಿಣಾಮ ವೀಲ್‌ ಸ್ಕಿಡ್‌ ಆಗಿತ್ತು. ರೈಲಿನಲ್ಲಿ ಹಲವು ಪತ್ರಕರ್ತರೂ ಇದ್ದರು. ಒಂದು ಗಂಟೆಯವರೆಗೆ ರೈಲು ನಿಂತಿತ್ತು. ಹಿಂದಿನ ಬೋಗಿಗಳಲ್ಲಿ ಹೊಗೆ ಕಾಣಿಸಿಕೊಂಡಿದ್ದು, ವಿದ್ಯುತ್‌ ವೈಫ‌ಲ್ಯ ಉಂಟಾಗಿತ್ತು ಎನ್ನಲಾಗಿದೆ. ನಂತರ ಆರಂಭದಲ್ಲಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಪ್ರಯಾಣ ಆರಂಭಿಸಿದ ರೈಲು, ನಂತರ 40 ಕಿ.ಮೀ ವೇಗದಲ್ಲಿ ಸಂಚರಿಸಿತು. ಮುಂದಿನ ರೈಲ್ವೆ ನಿಲ್ದಾಣದಲ್ಲಿ ಪತ್ರಕರ್ತರ‌ನ್ನು ಬೇರೆ ರೈಲಿಗೆ ಹತ್ತಿಸಿ ಕಳುಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next