Advertisement

ಡಿಜಿಟಲ್‌ ಕ್ರೈಮ್‌ ಹಾವಳಿ ಕುರಿತ “ಗುಳ್ಟು’ಚಿತ್ರದ ಟ್ರೈಲರ್ ರಿಲೀಸ್

04:21 PM Mar 22, 2018 | |

ಡಿಜಿಟಲ್‌ ಕ್ರೈಮ್‌ ಕುರಿತ ಸಿನಿಮಾ “ಗುಳ್ಟು’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, “ಹಸಿ ಮನಸಿಗೆ ಆಸೆಗಳು ಜಾಸ್ತಿ ಇರುತ್ತವೆ, ಬೆಳಿತಾ ಬೆಳಿತಾ ಈ ಮನಸು ಎಷ್ಟು ಹೊಂದುಕೊಂಡು ಹೋಗುತ್ತವೆ ಅಂದ್ರೆ, ಅದರ ಒಳಗಿರುವ ಆಸೆಗಳಿಗೆ ಒಂಚೂರು ಜಾಗ ಇಲ್ದೇ ಇರೋ ಅಷ್ಟು’…. ಎಂಬ ಸಂಭಾಷಣೆಯೊಂದಿಗೆ ಶುರುವಾಗಿ “ನಾನು ಬೇರೆ ಯಾರಿಗೂ ಹೀರೋ ಅಲ್ಲ, ನನಗೆ ಮಾತ್ರ ಹೀರೋ’….ಎಂಬ ಸಂಭಾಷಣೆಯಲ್ಲಿ ಮುಗಿಯುವ ಹೊತ್ತಿಗೆ ಸಿನಿಪ್ರಿಯರಿಗೆ ಸಾಕಷ್ಟು ಪ್ರಶ್ನೆಗಳನ್ನು ಟ್ರೈಲರ್ ಹುಟ್ಟು ಹಾಕುತ್ತದೆ.

Advertisement

ಅಲ್ಲದೇ ಚಿತ್ರದ ಶೀರ್ಷಿಕೆಗೆ “ಆನ್‌ಲೈನ್‌’ ಎಂಬ ಟ್ಯಾಗ್‌ಲೈನ್‌ ಕೂಡ ಇದೆ. ಈ ಚಿತ್ರದ ಮೂಲಕ ಜನಾರ್ದನ್‌ ನಿರ್ದೇಶಕರಾಗುತ್ತಿದ್ದು, ನವೀನ್‌ ಶಂಕರ್‌ ಹೀರೋ ಆಗುತ್ತಿದ್ದಾರೆ. ಪ್ರಶಾಂತ್‌ರೆಡ್ಡಿ ಮತ್ತು ದೇವರಾಜ್‌ ರಾಮಣ್ಣ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಕ್ರೈಮ್‌ ಥ್ರಿಲ್ಲರ್‌ ಜಾನರ್‌ ಚಿತ್ರವಾಗಿರುವ ಇದು, ಸೈಬರ್‌ ಕ್ರೈಮ್‌ ಕಥೆ ಹೊಂದಿದೆ.

ಈಗಂತೂ ಡಿಜಿಟಲ್‌ ಕ್ರೈಮ್‌ ಹಾವಳಿ ಹೆಚ್ಚು. ಆ ಅಂಶ ಇಟ್ಟುಕೊಂಡು, ಅದಕ್ಕೊಂದು ಚೆಂದದ ಪ್ರೇಮಕಥೆ ಹೆಣೆದು, ಥ್ರಿಲ್ಲಿಂಗ್‌ ಅಂಶಗಳೊಂದಿಗೆ ಸಿನಿಮಾ ಮಾಡಿದ್ದಾರೆ ಜನಾರ್ದನ್‌. ಈ ಚಿತ್ರಕ್ಕೆ ಸೋನು ಗೌಡ ನಾಯಕಿಯಾಗಿದ್ದಾರೆ. ಅವರಿಗಿಲ್ಲಿ ವಿಭಿನ್ನ ಪಾತ್ರ ನೀಡಿದ್ದಾರೆ ನಿರ್ದೇಶಕರು.

ಉಳಿದಂತೆ ಅವಿನಾಶ್‌, ರಂಗಾಯಣ ರಘು, ನಾಗೇಂದ್ರ ಶಾ, ಅಪೂರ್ವ, ಸೋಮ, ಪಲ್ಲವಿರಾಜು, ಧನಂಜಯ್‌, ಶ್ರುತಿ ರಘುನಂದ ಇತರೆ ಕಲಾವಿದರು ನಟಿಸಿದ್ದಾರೆ. ನಾಯಕ ನವೀನ್‌ ಶಂಕರ್‌ಗೆ ಮೊದಲ ಚಿತ್ರವಾದರೂ, ರಂಗಭೂಮಿಯ ಹಿನ್ನೆಲೆ ಇದೆ. ಅಮಿತ್‌ ಆನಂದ್‌ ಚಿತ್ರಕ್ಕೆ ಸಂಗೀತ ನೀಡಿದ್ದು, ಐದು ಹಾಡುಗಳಿಗೆ ಅವರು ರಾಗ ಸಂಯೋಜಿಸಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು, ಛಾಯಾಗ್ರಾಹಕ ಶಾಂತಿ ಸಾಗರ್‌ ಅವರಿಗೆ ಮೊದಲ ಚಿತ್ರವಿದು. 

Advertisement

Udayavani is now on Telegram. Click here to join our channel and stay updated with the latest news.

Next