Advertisement

ಶಹಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕೊಲೆ ಶಂಕೆ

04:28 PM Dec 22, 2021 | Team Udayavani |

ಶಹಾಪುರ: ಮನೆಯಲ್ಲಿ ಕಿಟಕಿವೊಂದಕ್ಕೆ ನೇಣು ಬಿಗಿದ ರೀತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿರುವ ಘಟನೆ ದಿಗ್ಗಿ ಬೇಸ್ ಬಳಿ ನಡೆದಿದೆ.

Advertisement

ಭೀಮರಾಯ (22) ಸಾವಿಗೀಡಾಗಿರುವ ಯುವಕ ಎಂದು ತಿಳಿದು ಬಂದಿದೆ.

ಮಂಗಳವಾರ ತಡ ರಾತ್ರಿಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಬುಧವಾರ ಬೆಳಗಿನ ಜಾವ ಯುವಕ ಕಿಟಿಗೆಯೊಂದಕ್ಕೆ ನೇಣು ಬಿಗಿದುಕೊಂಡ ರೀತಿಯಲ್ಲಿ ದೃಶ್ಯ ಕಂಡು ಕುಟುಂಬಸ್ಥರ ರೋಧನೆ ಶುರುವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಕುರಿತು ತನಿಖೆ ಕೈಗೊಂಡ ಪೊಲೀಸರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವಕನ ಸಾವು ಕುರಿತು ಹಲವಾರು ಚರ್ಚೆಗಳು‌ ನಡೆದಿದ್ದು,‌ ಕೊಲೆ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆ ಕುರಿತು ಪೊಲೀಸರ ತನಿಖೆ ನಂತರವೇ ಸತ್ಯಾಸತ್ಯತೆ ತಿಳಿದು ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next