Advertisement

ಬೆಂಗಳೂರು: ಹಿಟಾಚಿ ಹರಿದು ಮೂರು ವರ್ಷದ ಮಗು ದಾರುಣ ಸಾವು

03:56 PM Jan 01, 2022 | Team Udayavani |

ಬೆಂಗಳೂರು: ಹಿಟಾಚಿ ಹರಿದು ಮೂರು ವರ್ಷದ ಮಗುವೊಂದು ಸಾವನ್ನಪ್ಪಿದ ದುರಂತ ಘಟನೆ ಉಪ್ಪಾರಪೇಟೆ ಧ್ವನಂತರಿ ರಸ್ತೆಯಲ್ಲಿ ಇಂದು (ಶನಿವಾರ) ನಡೆದಿದೆ.

Advertisement

ಸಿಮಿಯಾನ್ (3) ಮೃತ ಮಗು. ಮಗು ತನ್ನ ತಂದೆಯೊಂದಿಗೆ ಹೊರಗೆ ಬಂದಿತ್ತು. ಈ ವೇಳೆ ಹಿಟಾಚಿ ರಿವರ್ಸ್ ಬರುತ್ತಿದ್ದ ಹಿಟಾಚಿಗೆ ಮಗು ಸಿಲುಕಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ಚಾಲಕ ಗಮನಿಸದೆ ಇರುವುದರಿಂದ ರಿವರ್ಸ್ ಆಗಿ ಬರುತ್ತಿದ್ದ ಹಿಟಾಚಿಯ ಹಿಂಭಾಗಕ್ಕೆ ಮಗು ಸಿಲುಕಿ ಸಾವನ್ನಪ್ಪಿದೆ.

ಈ ಕುರಿತು ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರನ ದಾಖಲಾಗಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next