Advertisement

Udupi ಧರ್ಮ ಅವಹೇಳನ ರಾಜಕೀಯದ ದುರಂತ: ಪಲಿಮಾರು ಶ್ರೀ

07:43 PM Sep 09, 2023 | Team Udayavani |

ಉಡುಪಿ: ಧರ್ಮದ ಅವಹೇಳನ ಪರಾಕಾಷ್ಠೆ ಎಲ್ಲೆ ಮೀರಿದ್ದು, ಸನಾತನ ಧರ್ಮವನ್ನು ಅವಹೇಳನ ಮಾಡಿದ ರಾಜಕೀಯ ಪುಂಡರ ವಿರುದ್ಧ ಎಲ್ಲರೂ ಪ್ರತಿಭಟಿಸಬೇಕಿದೆ. ಇಂಥ ಹೇಳಿಕೆಗಳು ರಾಜಕೀಯದ ದುರಂತ ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಸನಾತನ ಧರ್ಮ ಅನಾದಿಕಾಲದ ಧರ್ಮವಾಗಿದೆ. ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.ಸನಾತನ ಧರ್ಮದ ಬಗ್ಗೆ ಹೇಳಿಕೆ ಕೊಡುವವರು ದೇವಸ್ಥಾನಕ್ಕೆ ಹೋಗುತ್ತಾರೆ.

ಆದರೆ ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಾರೆ. ಈ ರೀತಿ ಹೇಳಿಕೆಗಳ ವಿರುದ್ಧ ಜನರೆಲ್ಲರೂ ಪ್ರತಿಭಟಿಸಬೇಕು ಎಂದು ಶ್ರೀಪಾದರು ಪ್ರಕಟನೆಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next