Advertisement

ಕೊನೆ ದಿನದ ಪಾದಯಾತೆ : ಟ್ರಾಫಿಕ್ ಜಾಮ್‌ ಕಿರಿಕಿರಿ, ವಾಹನ ಸವಾರರ ಆಕ್ರೋಶ

12:43 PM Mar 04, 2022 | Team Udayavani |

ಬೆಂಗಳೂರು : ಪಾದಯಾತ್ರೆಯ ಅಂತಿಮ ದಿನವಾದ ಗುರುವಾರ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆಯ ಬಿಸಿ ವಾಹನ ಸವಾರರರಿಗೆ ಜೋರಾಗಿಯೇ ತಟ್ಟಿತು.

Advertisement

ಅರಮನೆ ಮೈದಾನದಿಂದ ಬಸವನಗುಡಿ ವರೆಗೆ ಅಷ್ಟೇ ಅಲ್ಲದೆ ಬೇರೆ ಬೇರೆ ಊರುಗಳಿಂದ ಹಾಗೂ ನಗರದ ಹಲವು ಭಾಗಗಳಿಂದ ವಾಹನಗಳಲ್ಲಿ ಕಾರ್ಯಕರ್ತರು ಸಮಾವೇಶದಕ್ಕೆ ಪಾಲ್ಗೊಳ್ಳಲು ಬಂದಿದ್ದರಿಂದ ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು.

ಮಲ್ಲೇಶ್ವರ ಸುತ್ತಮುತ್ತಲಿನ ಪ್ರದೇಶಗಳು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಸಂಚಾರ ದಟ್ಟಣೆ ಕಂಡು ಬಂತು. ಶೇಷಾದ್ರಿಪುರಂ- ಮಲ್ಲೇಶ್ವರಂ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌
ಆಗಿದ್ದವು. ಆನಂದ್‌ ರಾವ್‌ ಸರ್ಕಲ್‌, ರೇಸ್‌ ಕೋರ್ಸ್‌ ರಸ್ತೆ, ಚಾಲುಕ್ಯ ಸರ್ಕಲ್‌, ರೈಲ್ವೆ ಪ್ಯಾರಲ್‌ ರೋಡ್‌ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್‌ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಟ
ನಡೆಸಿದರು. ಸದಾಶಿವನಗರದ ಶಿವಾಜಿ ಸರ್ಕಲ್‌ ನಲ್ಲಿ ಟ್ರಾಫಿಕ್ ಜಾಮ್‌ ಆಗಿತ್ತು. ಮೇಕೆದಾಟು ಪಾದ ಯಾತ್ರೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂದತ್ತ ಸಾಗುವ ಬಿಎಂಟಿಸಿ ಸಂಚಾರ ಮಾರ್ಗದ
ಬದಲಾಗಿತು.¤ ಹೀಗಾಗಿ ಬಸ್‌ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರು.

ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯುವ ಮೆಜೆಸ್ಟಿಕ್‌, ಗಾಂಧಿನಗರ, ಚಿಕ್ಕಪೇಟೆ ಮಾರ್ಗದಲ್ಲಿ ಪಾದಯಾತ್ರೆ ಸಾಗಿದ್ದರಿಂದ ಕಿ.ಮೀ.ಗಟ್ಟಲೆ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಗಿತ್ತು.
ಸಂಚಾರ ದಟ್ಟಣೆ ಬಿಸಿ ಅನುಭವಿಸಿದ ವಾಹನ ಸವಾರರು ಕೆಲವೆಡೆ ಆಕ್ರೋಶ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next