Advertisement

ಕಾಫಿನಾಡಿನ ಪ್ರವಾಸಿ ತಾಣದತ್ತ ಜನರ ಚಿತ್ತ

03:49 PM May 09, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ ಹೊಡೆತಕ್ಕೆ ನೆಲ ಕಚ್ಚಿದ್ದ ಪ್ರವಾಸೋದ್ಯಮ ಇದೀಗ ಚೇತರಿಕೆಯ ಹಾದಿ ಹಿಡಿಯುತ್ತಿದೆ. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

Advertisement

ಕೋವಿಡ್‌ ಮೂರು ಅಲೆಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನೆಲ ಕಚ್ಚಿತ್ತು. ನಿಸರ್ಗ ಪ್ರಿಯರು ಇಲ್ಲದೆ ಪ್ರವಾಸಿ ತಾಣಗಳು ಭಣಗುಡುತ್ತಿದ್ದವು. ಕೋವಿಡ್‌ ಕ್ಷೀಣಗೊಂಡ ಬಳಿಕ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಪ್ರವಾಸಿ ತಾಣಗಳು ವಾರಾಂತ್ಯದಲ್ಲಿ ಜನಜಂಗುಳಿಯಿಂದ ತುಂಬಿರುತ್ತವೆ.

ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿಗರಿಗೆ ಉಣಬಡಿಸುತ್ತಿರುವ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರಾ, ಕೆಮ್ಮಣ್ಣುಗುಂಡಿ, ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರಗಳಾದ ಶೃಂಗೇರಿ, ಹೊರನಾಡು, ಕಳಸ, ಜಲಪಾತಗಳಾದ ಕಲ್ಲತ್ತಗಿರಿ, ಹೆಬ್ಬೆ, ಸಿರಿಮನೆ ಫಾಲ್‌ Õಗಳ ಸೌಂದರ್ಯ ಸವಿಯಲು ಜನಜಂಗುಳಿ ಅಡಿ ಇಡುತ್ತಿದೆ. ನೆಲಕಚ್ಚಿದ್ದ ಪ್ರವಾಸೋದ್ಯಮ ಚೇತರಿಕೆ ಹಾದಿ ಹಿಡಿದಿರುವುದಕ್ಕೆ ಪ್ರವಾಸಿಗರು ಭೇಟಿ ನೀಡಿದ ಅಂಕಿ- ಅಂಶಗಳೇ ಸಾಕ್ಷಿಯಾಗಿವೆ.

ದತ್ತಪೀಠಕ್ಕೆ ಕಳೆದ ವರ್ಷ 4,52,025 ಪ್ರವಾಸಿಗರು ಭೇಟಿ ನೀಡಿದ್ದಾರೆ. ಜನವರಿಯಲ್ಲಿ 31,100, ಫೆಬ್ರವರಿ 12,115, ಮಾರ್ಚ್‌ 12,400, ಜೂನ್‌ 12,700, ಜುಲೈ 18,900, ಆಗಸ್ಟ್‌ 8,950, ಸೆಪ್ಟೆಂಬರ್‌ 53,800, ಅಕ್ಟೋಬರ್‌ 88,500, ನವೆಂಬರ್‌ 9,500, ಡಿಸೆಂಬರ್‌ನಲ್ಲಿ 98,560 ಪ್ರವಾಸಿಗರು ಭೇಟಿ ನೀಡಿದ್ದಾರೆ.

ಕೆಮ್ಮಣ್ಣುಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮಕ್ಕೆ 10 ತಿಂಗಳಲ್ಲಿ 1,40,290 ಪ್ರವಾಸಿಗರು ಭೇಟಿ ನೀಡಿದ್ದರೆ, ಕಳಸದ ಕಳಸೇಶ್ವರ ದೇವಾಲಯಕ್ಕೆ 1,18,180 ಭಕ್ತರು, ಹೊರನಾಡಿನ ಆದಿ ಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ 10,61,835 ಪ್ರವಾಸಿಗರು, ಶೃಂಗೇರಿ ಶಾರದಾಪೀಠಕ್ಕೆ 14,48,046 ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

Advertisement

ಈ ವರ್ಷದ ಜನವರಿಯಲ್ಲಿ ಒಟ್ಟು 3,13,495 ಪ್ರವಾಸಿಗರು ಭೇಟಿ ನೀಡಿದ್ದರೆ, ಶೃಂಗೇರಿಗೆ 1,25,445 ಪ್ರವಾಸಿಗರು, ಹೊರನಾಡಿಗೆ 1,12,500, ಕಳಸಕ್ಕೆ 19,400, ದತ್ತಪೀಠಕ್ಕೆ 36,150, ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ 20 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.

ಫೆಬ್ರವರಿಯಲ್ಲಿ ಒಟ್ಟು 3,37,893 ಪ್ರವಾಸಿಗರು ಭೇಟಿ ನೀಡಿ ವಿವಿಧ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದ್ದಾರೆ. ಶೃಂಗೇರಿಗೆ 1,37,793, ಹೊರನಾಡು 1.20 ಲಕ್ಷ, ಕಳಸಕ್ಕೆ 35 ಸಾವಿರ, ದತ್ತಪೀಠಕ್ಕೆ 27 ಸಾವಿರ, ಕೆಮ್ಮಣ್ಣುಗುಂಡಿಗೆ 18,100 ಮಂದಿ ಭೇಟಿ ನೀಡಿದ್ದಾರೆ.

ಮಾರ್ಚ್‌ನಲ್ಲಿ ಒಟ್ಟು 3,10,840 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ ಶೃಂಗೇರಿಗೆ 1.38ಲಕ್ಷ, ಹೊರನಾಡಿಗೆ 1,17,100, ಕಳಸಕ್ಕೆ 11,200, ದತ್ತಪೀಠಕ್ಕೆ 28,440, ಕೆಮ್ಮಣ್ಣು ಗುಂಡಿಗೆ 16,100 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಕೋವಿಡ್‌ ಬಳಿಕ ಪ್ರವಾಸಿಗರ ದಂಡು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದು ಕಳೆಗುಂದಿದ್ದ ಪ್ರವಾಸಿ ತಾಣಗಳು ಕಳೆಗಟ್ಟುತ್ತಿವೆ.

ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿಗೆ 33.33ಕೋಟಿ, ಕಟ್ಟಡ ನಿರ್ಮಾಣಕ್ಕೆ 11ಕೋಟಿ, ಕೆಆರ್‌ಐಡಿಎಲ್‌ಗೆ 8 ಕೋಟಿ ರೂ., ಪುರಾತತ್ವ ಇಲಾಖೆಗೆ 85ಲಕ್ಷ ರೂ. ಬಿಡುಗಡೆಗೊಂಡಿದ್ದು, 81.14ಕೋಟಿ ರೂ. ಅನುದಾನ ಬಿಡುಗಡೆಗೊಳ್ಳಬೇಕಿದೆ. -ಆರ್‌. ಶಿವಕುಮಾರ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next