Advertisement

ಕುರಾಂಗಣಿ ಕಾಡಿನ ಬೆಂಕಿ: 18ಕ್ಕೆ ಏರಿದ ಬಲಿ ಸಂಖ್ಯೆ

04:21 PM Mar 22, 2018 | udayavani editorial |

ಕೊಯಮುತ್ತೂರು : ಥೇಣಿ ಜಿಲ್ಲೆಯ ಕುರಾಂಗಣಿ ಕಾಡಿನ ಬೆಂಕಿಗೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿದೆ. ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬಳು ಇಂದು ಕೊನೆಯುಸಿರೆಳೆದಳು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

32ರ ಹರೆಯದ ಮೃತ ಮಹಿಳೆಯನ್ನು ಚೆನ್ನೈ ನಿವಾಸಿ ಜಯಶ್ರೀ ಎಂದು ಗುರುತಿಸಲಾಗಿದೆ. ತೀವ್ರ ಸುಟ್ಟಗಾಯಗಳಿಗೆ ಗುರಿಯಾಗಿದ್ದ ಆಕೆಯನ್ನು ಮಧುರೆಯಿಂದ ವಿಮಾನದಲ್ಲಿ ತಂದು ಮಾರ್ಚ್‌ 12ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

ಕಳೆದ ಮಾರ್ಚ್‌ 10ರಂದು ಈರೋಡ್‌ ಮತ್ತು ತಿರುಪುರದ 12 ಮಂದಿ ಹಾಗೂ ಚೆನ್ನೈನ 27 ಮಂದಿ ಸೇರಿದಂತೆ ಒಟ್ಟು 39 ಮಂದಿ ಪ್ರವಾಸಾರ್ಥವಾಗಿ ಬಂದಿದ್ದರು. ಚೆನ್ನೈ ತಂಡದ ಮೂವರು ಕೇರಳಕ್ಕೆ ಹೋಗಿದ್ದರೆ ಉಳಿದವರು ಟ್ರೆಕ್ಕಿಂಗ್‌ಗೆ ಮುಂದಾಗಿದ್ದರು. 

36 ಮಂದಿ ಕಾಡಿನ ಬೆಂಕಿಗೆ ಸಿಲುಕಿದ್ದರು. ಈ ಪೈಕಿ 18 ಮಂದಿ ಮೃತಪಟ್ಟರು;  10 ಮಂದಿಯನ್ನು ಪಾರುಗೊಳಿಸಲಾಗಿತ್ತು. ಉಳಿದವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next