Advertisement

ನಿರುದ್ಯೋಗಿಗಳಿಗೆ ಸಿಹಿಸುದ್ದಿ, ವಿದ್ಯಾರ್ಥಿಗಳಿಗೆ ಕಹಿಸುದ್ದಿ: ಹೇಗಿದೆ ನಿಮ್ಮ ಗ್ರಹಬಲ ?

07:28 AM Dec 09, 2020 | Mithun PG |

ಮೇಷ: ದೂರ ಪ್ರಯಾಣದಿಂದ ಶ್ರಮ ಹೆಚ್ಚಾಗಲಿದೆ. ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ತೀರ್ಪು. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಚಿನ್ನ, ಬೆಳ್ಳಿ ಒಡವೆ ಮನೆಗೆ ಬಂದೀತು. ಲಾಟರಿ, ಸಟ್ಟಾ ಇತ್ಯಾದಿಗಳು ಸಹಾಯ ನೀಡಬಹುದು.

Advertisement

ವೃಷಭ: ನಿರುದ್ಯೋಗಿಗಳು ಉತ್ತಮ ಅವಕಾಶವನ್ನು ಪಡೆಯಲಿದ್ದಾರೆ. ಪ್ರವಾಸ, ಯಾತ್ರೆಗಳು ಮಾನಸಿಕ ಶಾಂತಿಯನ್ನು ನೀಡಲಿವೆ. ಎಷ್ಟೋ ಬಾರಿ ನಿಮ್ಮ ಎಣಿಕೆಯಂತೆ ದೈವ ಸಹಾಯವಿದ್ದು, ಕಾರ್ಯ ಸುಗಮವಾಗಲಿದೆ. ವಾರಾಂತ್ಯ ಶುಭವಿದೆ.

ಮಿಥುನ: ಎಲ್ಲ ವಿಚಾರಗಳಲ್ಲಿ ಜಾಗ್ರತೆಯಿಂದ ಮುಂದುವರಿದಲ್ಲಿ ಅದೇ ಪ್ರಯತ್ನ ಬಲದಲ್ಲಿ ಕಾರ್ಯಸಾಧನೆಯಾಗುತ್ತದೆ. ಅನೇಕ ಸಲ ನಿರ್ಧರಿಸುವ ವೇಳೆಗೆ ಕಾರ್ಯಮುಗಿದಿರುತ್ತದೆ. ಹೊಸ ಯೋಜನೆಯೊಂದು ರೂಪ ತಳೆದೀತು.

ಕರ್ಕ: ವಾರಾಂತ್ಯದಲ್ಲಿ ಶುಭವಿದೆ. ದಾಯಾದಿ ಕಲಹ, ಮಾನಸಿಕ ಕಿರಿಕಿರಿಗೆ ಕಾರಣವಾದೀತು. ತಾಳ್ಮೆ ಇರಲಿ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣದ ಯೋಗವಿದೆ. ಸ್ವತಂತ್ರ ವೃತ್ತಿಯವರಿಗೆ ಕ್ಷೇತ್ರ ವಿಸ್ತರಣೆಗೆ ಅವಕಾಶ ತಂದೀತು.

ಸಿಂಹ: ಕಫ‌ ಬಾಧೆಯಿಂದ ಅನಾರೋಗ್ಯ ಅವರನ್ನು ಕಾಡಲಿದೆ. ನಿಮ್ಮ ವಿಶ್ವಾಸ ದುರುಪಯೋಗವಾಗದಂತೆ ಜಾಗ್ರತೆವಹಿಸಿರಿ. ರಾಜಕೀಯ ವರ್ಗದಲ್ಲಿ ಸ್ಥಾನಮಾನ, ಗೌರವ ಬೆಳೆಯಲಿದೆ. ಹೊಸ ಯೋಜನೆಗಳಿಗೆ ಧನ ವಿನಿಯೋಗವಾದೀತು

Advertisement

ಕನ್ಯಾ: ಸ್ವಪ್ರಯತ್ನ ಪ್ರಾಮಾಣಿಕವಾಗಿದ್ದರೂ ಅಸಫ‌ಲವೇ. ದುಃಖ ದುಮ್ಮಾನದ ವಾರ. ಕಾರ್ಯಕ್ಷೇತ್ರದಲ್ಲಿ ಹಲವು ವೈರುಧ್ಯಗಳು ಗಂಭೀರ ಸ್ವಭಾವದ ನಿಮಗೆ ಅಚ್ಚರಿ ತಂದೀತು. ಅನಾವಶ್ಯಕ ಖರ್ಚುವೆಚ್ಚಗಳು ಬಂದಾವು.

ತುಲಾ: ಲಾಭ ಸ್ಥಾನದ ಶುಕ್ರ ನಿಮ್ಮ ಚಿಂತನೆಗೆ ಸಾಧಕನಾಗುವನು, ಮುನ್ನಡೆಯಿರಿ. ಆರೋಗ್ಯದಲ್ಲಿ ಪಿತ್ತ, ಉಷ್ಣವಾಯು ಪ್ರಕೋಪ ತೋರಿಬರಲಿದೆ. ಮಕ್ಕಳೊಡನೆ ವಿರಸ ತಂದೀತು. ವಿದ್ಯಾರ್ಥಿ ಗಳಿಗೆ ವಿದ್ಯಾರ್ಜನೆಯಲ್ಲಿ ಕೊಂಚ ಹಿನ್ನಡೆ ಕಾಣಿಸಬಹುದು.

ವೃಶ್ಚಿಕ: ಉಳಿತಾಯವೆಲ್ಲ ಇಳಿತಾಯದಲ್ಲಿ ಕರಗದಂತೆ ಜಾಗ್ರತೆ ವಹಿಸಿರಿ. ಯಾವುದಕ್ಕೂ ದೃಢ ನಿರ್ಧಾರದಿಂದ ಮುಂದುವರಿಯಿರಿ. ನಿಮ್ಮಿಷ್ಟದಂತೆ ಯೋಜನೆಗಳು ಸಫ‌ಲವಾಗಿ ಸಾಂಸಾರಿಕ ಸುಖ ಸುಧಾರಿಸಲಿದೆ. ವಾರಾಂತ್ಯ ಶುಭವಿದೆ.

ಧನು: ಬಂಧುಗಳನ್ನು ಉಪಚರಿಸಲು ಹೋಗಿ ಉಪದ್ರವ ತಂದುಕೊಳ್ಳುವಿರಿ. ಚರ್ಚೆ ವಿಚಾರ ವಿನಿಮಯದಿಂದ ಕಾರ್ಯಸಿದ್ಧಿ. ಧಾರ್ಮಿಕ ಕೃತ್ಯಗಳಲ್ಲಿ ಬಿಡುವಿಲ್ಲದ ದುಡಿಮೆ. ವಾತಮಯದಿಂದ ದೇಹಾಯಾಸ ತಲೆದೋರಲಿದೆ.

ಮಕರ: ಯೋಗ್ಯ ವಯಸ್ಕರಿಗೆ ವೈವಾಹಿಕ ಭಾಗ್ಯಕ್ಕೆ ಕಾಯುವ ಪ್ರಸಂಗ ಬರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಮೂಲಧನಕ್ಕೆ ಹಾನಿಯಾಗದಂತೆ ಜಾಗ್ರತೆ ವಹಿಸಿರಿ. ಆದಾಯ ಉತ್ತಮವಿದ್ದರೂ ವ್ಯಯದ ಬಾಬ್ತುಗಳು ಅಧಿಕವಾಗಲಿವೆ.

ಕುಂಭ: ದೇವತಾ ಕಾರ್ಯಗಳಿಗೆ ಇದು ಸಕಾಲ. ವಿದ್ಯಾಭ್ಯಾಸದಲ್ಲಿ ಕೊರತೆ, ಹಿನ್ನಡೆಗೆ ಕಾರಣವಾದೀತು. ಎಚ್ಚರಿಕೆಯಿಂದ ನಡೆದಲ್ಲಿ ಕೋರ್ಟು, ಕಚೇರಿ ವ್ಯವಹಾರದಲ್ಲಿ ಸಮಾಧಾನ ತಂದು ಕೊಡಲಿದೆ. ದೇವತಾ ಕಾರ್ಯಗಳಿಗೆ ಇದು ಸಕಾಲ.

ಮೀನ: ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಅಕ್ರಮ ವ್ಯವಹಾರ ಬೆಳಕಿಗೆ ಬಂದು ಮಾನಹಾನಿಯಾದೀತು. ಧನಾಗಮನವಿದ್ದರೂ ಸಹಾಯಕರ ಸಮಸ್ಯೆಯಿಂದ ಅಧಿಕಾರಿ ವರ್ಗದ ಉಪದ್ರವ, ಸಮಸ್ಯೆಗಳು ತೋರಿ ಬರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next