Advertisement

ಇಂದು ಭತ್ತದ ಕೊಯ್ಲಿಗೆ ಮುಖ್ಯಮಂತ್ರಿ ಚಾಲನೆ 

06:15 AM Dec 07, 2018 | Team Udayavani |

ಮಂಡ್ಯ: ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶುಕ್ರವಾರ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಹೊರವಲಯದಲ್ಲಿರುವ ಗದ್ದೆಯಲ್ಲಿ ಬೆಳೆದು ನಿಂತಿರುವ ಭತ್ತದ ಬೆಳೆಯನ್ನು ಕಟಾವು ಮಾಡುವ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

Advertisement

ಕುಮಾರಸ್ವಾಮಿಯವರೇ ಆಗಸ್ಟ್‌ 11ರಂದು ಈ ಪ್ರದೇಶದಲ್ಲಿ ನಾಟಿ ಮಾಡಿದ್ದರು. ಈ ಭತ್ತದ ಬೆಳೆ ಈಗ ಕಟಾವಿಗೆ ಬಂದಿದೆ. ಶುಕ್ರವಾರ ಸಂಜೆ 4ಕ್ಕೆ ಆಗಮಿಸಲಿರುವ ಸಿಎಂ, ಭತ್ತವನ್ನು ಕಟಾವು ಮಾಡಲಿದ್ದಾರೆ. ನಂತರ, ಗದ್ದೆಯ ಪಕ್ಕದ ಜಮೀನಿನಲ್ಲಿ ನಿರ್ಮಿಸಿರುವ ಕಣದಲ್ಲಿ ಅದನ್ನು ರಾಶಿ ಹಾಕಲಾಗುವುದು.

ಬಳಿಕ, ಭತ್ತದ ರಾಶಿಗೆ ಮುಖ್ಯಮಂತ್ರಿ, ಜಿಲ್ಲಾ ಸಚಿವರು ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪೂಜೆ ಸಲ್ಲಿಸಲಿದ್ದಾರೆ. ನಂತರ, ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಾಲೆಗೆ ಬಸ್‌ ಉರುಳಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ವಿತರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next