Advertisement

Subramanya Shashti ನಾಡಿನಾದ್ಯಂತ ಇಂದು ಷಷ್ಠಿ ಮಹೋತ್ಸವ ಸಂಭ್ರಮ

11:45 PM Dec 17, 2023 | Team Udayavani |

ಮಂಗಳೂರು/ಉಡುಪಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ ಸಹಿತ ತಾಂಗೋಡು, ಮಾಂಗೋಡು, ಅರಿತೋಡು, ಮುಚ್ಚಲಕೋಡು ನಾಗಾಲಯಗಳು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಡಿ.18ರಂದು ಷಷ್ಠಿ ಮಹೋತ್ಸವ ಸಂಭ್ರಮದಿಂದ ಜರಗಲಿದೆ.

Advertisement

ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಮಾಣೂರು ಶ್ರೀ ಅನಂತಪದ್ಮನಾಭ ದೇವಸ್ಥಾನ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿಯೂ ದೇವರಿಗೆ ವಿಶೇಷ ಪೂಜೆ, ರಥೋತ್ಸವಗಳು ನಡೆಯಲಿದೆ. ಸರಕಾರದ ಅಧಿಕೃತ ರಜೆ ಇಲ್ಲದಿದ್ದರೂ, ಬೆಳಗ್ಗಿನಿಂದಲೇ ದೇಗುಲಗಳಲ್ಲಿ ಭಕ್ತ ಸಂದಣಿ ಕಂಡು ಬರಲಿದೆ.

ಮಧ್ಯಾಹ್ನ ಅನ್ನಸಂರ್ಪಣೆಗಳೂ ನಡೆಯಲಿವೆ. ರವಿವಾರ ವಿವಿಧೆಡೆಗಳಲ್ಲಿ ಸ್ಕಂದ ಪಂಚಮಿಯನ್ನೂ ಆಚರಿಸಲಾಗಿದ್ದು, ರಜೆ ದಿನವಾದ್ದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next