Advertisement

ಇಂದು ವಿಷ್ಣುವರ್ಧನ್‌ 10ನೇ ಪುಣ್ಯ ಸ್ಮರಣೆ

01:08 PM Dec 30, 2019 | Lakshmi GovindaRaj |

ಡಾ.ವಿಷ್ಣುವರ್ಧನ್‌ ಅವರು ಇಲ್ಲದ ಹತ್ತು ವರ್ಷಗಳು ಕಳೆದು ಹೋಗಿವೆ. ಆದರೆ, ಅವರ ಕುಟುಂಬ ವರ್ಗ ಹಾಗು ಅಭಿಮಾನಿ ವರ್ಗಕ್ಕೆ ಮಾತ್ರ ವಿಷ್ಣುವರ್ಧನ್‌ ಅವರು ಇಲ್ಲ ಎಂಬ ಭಾವನೆ ಎಂದಿಗೂ ಬಂದಿಲ್ಲ. ವಿಷ್ಣುವರ್ಧನ್‌ ಅವರ ಅನೇಕ ಸಿನಿಮಾಗಳ ಮೂಲಕ ಅವರನ್ನು ಪ್ರತಿ ನಿತ್ಯವೂ ನೆನಪಿಸಿಕೊಳ್ಳುವ ಮೂಲಕ ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನು ಜೀವಂತವಾಗಿರಿಸಿದ್ದಾರೆ.

Advertisement

ಇಂದು (ಡಿ.30) ವಿಷ್ಣುವರ್ಧನ್‌ ಅಗಲಿದ ದಿನ. ಅವರು ಅಗಲಿ ಒಂದು ದಶಕ ಉರುಳಿದ್ದರೂ, ಅವರ ಮೇಲಿನ ಪ್ರೀತಿ, ಅಭಿಮಾನ ಮಾತ್ರ ಬತ್ತಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಾ.ವಿಷ್ಣು ವರ್ಧನ್‌ ಅವರನ್ನು ಸ್ಮರಿಸಲಾಗುತ್ತಿದೆ. ವಿಷ್ಣುವರ್ಧನ್‌ ಅವರ ಕುಟುಂಬ ವರ್ಗ ಸೋಮವರ ಮುಂಜಾನೆ ಮೈಸೂರಿಗೆ ತೆರಳಿ, ಅಲ್ಲಿ ನಿರ್ಮಾಣಕ್ಕೆ ಸಜ್ಜಾಗಿರುವ ಸ್ಮಾರಕ ಸ್ಥಳದಲ್ಲಿ ಪೂಜೆ ನೆರವೇರಿಸಲಿದೆ.

ಇದರೊಂದಿಗೆ ಅಭಿಮಾನಿಗಳು ಸಹ ಅಲ್ಲಿ ತಮ್ಮ ನಾಯಕನಿಗೆ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್‌ ಅವರ ಕುಟುಂಬ ಅಭಿಮಾನಿಗಳೊಂದಿಗೆ ಸೋಮವಾರ ದಿನವಿಡೀ ಸಮಯ ಕಳೆಯಲಿದೆ. ಸೋಮವಾರ (ಇಂದು) ಬೆಳಗ್ಗೆ ಕುಟುಂಬವರ್ಗ ವಿಷ್ಣುವರ್ಧನ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೂಜೆ ನೆರವೇರಿಸಲಿದೆ. ಆ ಬಳಿಕ ಅಲ್ಲಿ ಸೇರಿದ ಅಭಿಮಾನಿಗಳ ಜೊತೆ ಮಾತುಕತೆ ನಡೆಸಲಿದೆ.

ಈ ಸಂದರ್ಭದಲ್ಲಿ ವಿಷ್ಣುವರ್ಧನ್‌ ಅವರ ಕುರಿತು ಅನೇಕ ಗೀತೆಗಳನ್ನು ಹಾಡುವ ಮೂಲಕ ವಿಶೇಷ ನಮನ ಸಲ್ಲಿಸುವ ಕಾರ್ಯಕ್ರಮವೂ ಜರುಗಲಿದೆ. ರಾಜ್ಯಾದ್ಯಂತ ಇರುವ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಸಹ, ವಿಷ್ಣು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next