Advertisement

ನನ್ನ ಸರಕಾರ ಪತನಕ್ಕೆ ಭಾರತ ಷಡ್ಯಂತ್ರ ನೇಪಾಲ ಪ್ರಧಾನಿ ಕೆ.ಪಿ. ಓಲಿ ನೇರ ಆರೋಪ

07:52 AM Jun 29, 2020 | mahesh |

ಕಠ್ಮಂಡು: ನೇಪಾಲ ಸರಕಾರ ಪತನ­ಗೊಳಿಸಲು ಭಾರತ ಸಂಚು ರೂಪಿಸುತ್ತಿದೆ ಎಂದು ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇರ ಆರೋಪ ಮಾಡಿದ್ದಾರೆ. ಹೊಟೇಲ್‌ಗ‌ಳಲ್ಲಿ ಕುಳಿತುಕೊಂಡು ಭಾರತ ವತಿಯಿಂದ ಸರಕಾರ ಪತನಗೊಳಿಸಲು ಯತ್ನ ಮಾಡ­ಲಾ­ಗುತ್ತಿದೆ. ಇಂಥ ಯತ್ನಕ್ಕೆ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ರವಿವಾರ ಹೇಳಿದ್ದಾರೆ.

Advertisement

ಚೀನ ಪ್ರೇರಿತವಾಗಿ ಭಾರತದ ಸ್ಥಳಗ­ಳನ್ನು ನೇಪಾಲದ ಭೂಪಟದಲ್ಲಿ ಸೇರ್ಪ­ಡೆಗೊಳಿಸಿದ ವಿಧೇಯಕ ಸಂಸತ್‌ನಲ್ಲಿ ಅಂಗೀಕರಿಸಿದ ದಿನದಿಂದಲೇ ಸರಕಾರದಲ್ಲಿ ಅಪಸ್ವರಗಳು ಕೇಳಲಾ­ರಂಭಿಸಿದ್ದವು. ಪಕ್ಷದ ಕೆಲವು ನಾಯಕರು ಕಠ್ಮಂಡು­ವಿನ ಹೋಟೆಲೊಂದರಲ್ಲಿ ಒಂದರ ಹಿಂದೊಂ­ದರಂತೆ ಸಭೆ ನಡೆಸಿ ನನ್ನ ಪದಚ್ಯುತಿಯ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ. ಭಾರತದ ಈ ತಂತ್ರ ಸಫ‌ಲವಾಗುವುದಿಲ್ಲ. ಯಾವುದೇ ಕಾರಣಕ್ಕೂ ನಾನು ಪ್ರಧಾನಿ ಹುದ್ದೆ ತೊರೆಯುವುದಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next