Advertisement

ರಾಜ್ಯಕ್ಕೆ ಬರ; ದೇಶದಲ್ಲಿ  ಬಂಪರ್‌ ಬೆಳೆ !

08:45 AM Aug 07, 2017 | Team Udayavani |

ಹೊಸದಿಲ್ಲಿ: ಒಂದೆಡೆ ರಾಜ್ಯದಲ್ಲಿ ಸತತ ಎರಡನೇ ವರ್ಷವೂ ಮಳೆರಾಯ ಮುನಿಸಿಕೊಂಡು ಬರಗಾಲ ಮುಂದುವರಿದಿದ್ದು, ಕರ್ನಾಟಕದ ರೈತರು ಬೆಳೆ ಬೆಳೆಯಲಾಗದೆ ಕಂಗಾಲಾಗಿ ಕುಳಿತಿದ್ದರೆ, ದೇಶದ ಇತರ ರಾಜ್ಯಗಳ ಕೃಷಿಕರು ಬಂಪರ್‌ ಬೆಳೆ ತೆಗೆಯುವ ಉತ್ಸಾಹದಲ್ಲಿದ್ದಾರೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ 2017-18ನೇ ಸಾಲಿನಲ್ಲಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ನಡೆದಿರುವುದು ಹಾಗೂ ಉತ್ತಮ ಮುಂಗಾರು ಕೃಷಿಕರ ಕೈ ಹಿಡಿದಿರುವ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಇಳು ವರಿ ದಾಖಲಾಗುವ ನಿರೀಕ್ಷೆಯಿದೆ. 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 13.80 ಕೋಟಿ ಟನ್‌ ಆಹಾರ ಧಾನ್ಯಗಳ ಇಳು ವರಿ ದಾಖಲಾಗಿತ್ತು. ಈ ಬಾರಿ ಮುಂಗಾರು ಮಳೆ ಹಿಂದಿನ ಬಾರಿ ಗಿಂತಲೂ ಉತ್ತಮವಾಗಿದ್ದು, ಇಳುವರಿ ಕೂಡ ದಾಖಲೆ ಪ್ರಮಾಣ ತಲುಪುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಶೋಭಾ ಕೆ. ಪಟ್ನಾಯಕ್‌ ಹೇಳಿದ್ದಾರೆ.

ಹೆಚ್ಚು ಕೃಷಿ ಭೂಮಿ ಹೊಂದಿರುವ ಕರ್ನಾಟಕದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ಬೇಸರ ತಂದಿದೆ. ಒಂದೊಮ್ಮೆ ಕರ್ನಾಟಕದಲ್ಲೂ ಉತ್ತಮ ಮಳೆಯಾಗಿದ್ದರೆ ಇಳುವರಿ ಇನ್ನೂ ಹೆಚ್ಚುವ ನಿರೀಕ್ಷೆ ಇತ್ತು. ಆದರೆ ಇನ್ನೂ ಸಾಕಷ್ಟು ಮಳೆ ಬರಲು ಅವಕಾಶವಿದ್ದು, ಕರ್ನಾಟಕದಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಯಿದೆ ಎಂದು ಶೋಭಾ ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next