Advertisement

ಮುಂಡ್ಕೂರಿನಲ್ಲಿ ಆತಂಕ ಸೃಷ್ಠಿಸಿದ ಮುಂಬೈನ ವ್ಯಕ್ತಿ ಕ್ವಾರಂಟೈನ್ ಗೆ

05:32 PM May 16, 2020 | keerthan |

ಬೆಳ್ಮಣ್‌: ಮುಂಬೈಯಲ್ಲಿ ಉದ್ಯೋಗದಲ್ಲಿರುವ ಮುಂಡ್ಕೂರು ಗ್ರಾಮದ ನಿವಾಸಿಯೋರ್ವರು ಸರಕು ಸಾಗಟದ ವಾಹನದಲ್ಲಿ ಮುಂಬೈನಿಂದ ನೇರವಾಗಿ ಮನೆಗೆ ಬಂದು ಪರಿಸರದಲ್ಲಿ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.

Advertisement

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಈ ವ್ಯಕ್ತಿಯು ಉದ್ಯೋಗ ನಿಮಿತ್ತ ಮುಂಬೈನಲ್ಲಿದ್ದರು. ಇವರು ಲಾಕ್ ಡೌನ್ ಕಾರಣದಿಂದ ಸರಕು ಸಾಗಟದ ವಾಹನದಲ್ಲಿ ನೇರವಾಗಿ ಮನೆಗೆ ಬಂದಿದ್ದರು.

ಆದರೆ ಇದರಿಂದ ನೆರೆಮನೆಯವರು ಭಯಭೀತರಾಗಿ ಸ್ಥಳೀಯರಿಗೆ ಹಾಗೂ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಗ್ರಾಮಕರಣಿಕರು ಸ್ಥಳಕ್ಕಾಗಮಿಸಿ ಆತನನ್ನು ಆಂಬ್ಯುಲೆನ್ಸ್‌ ವಾಹನದಲ್ಲಿ ಕಾರ್ಕಳ ಕ್ವಾರಂಟೈನ್‌ ಕೇಂದ್ರಕ್ಕೆ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next