Advertisement
ಇವರೆಲ್ಲರೂ ಹೀಗೆ ಉದ್ಯೋಗ ತೊರೆದು ಬರಲು ಕಾರಣ ಯೋಧ ಔರಂಗಜೇಬ್. ಕಳೆದ ಜೂ. 14ರಂದು ಕಾಶ್ಮೀರದಲ್ಲಿ ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಗೀಡಾದ ಔರಂಗಜೇಬ್ ಅವರ ಸ್ನೇಹಿತರು ಇವರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಈ ಆಪ್ತ ಸ್ನೇಹಿತರಾದ ಮೊಹಮ್ಮದ್ ಕಿರಾಮತ್, ತಮ್ಮ ಜೀವದ ಗೆಳೆಯನ ಹತ್ಯೆಯ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ರಕ್ತ ಕುದಿಯಿತು. ಸುದ್ದಿ ಬಂದ ದಿನವೇ ಎಲ್ಲರೂ ಒಂದೆಡೆ ಸಭೆ ಸೇರಿ, ಭಾರತಕ್ಕೆ ಮರಳಲು ಹಾಗೂ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆವು. ಹಾಗೆ ತಕ್ಷಣಕ್ಕೆ ಕೆಲಸ ಬಿಡುವುದು ಸುಲಭವಿರಲಿಲ್ಲ. ಹೇಗೋ ಆ ಸಮಸ್ಯೆ ನಿಭಾಯಿಸಿಕೊಂಡು ಬಂದಿದ್ದೇವೆ. ಗೆಳೆಯನ ಸಾವಿನ ಪ್ರತೀಕಾರವೇ ನಮ್ಮ ಮುಂದಿನ ಹೆಜ್ಜೆ” ಎಂದಿದ್ದಾರೆ.
ಜಮ್ಮು ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಆದರೆ, ಕಾರ್ಯಾಚರಣೆ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಇಲ್ಲಿಯ ದುರೂ ಗ್ರಾಮದ ರಫೀಯಾಬಾದ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಪಡೆ ಪಹರೆ ಮತ್ತು ಶೋಧಕಾರ್ಯದಲ್ಲಿ ತೊಡಗಿದ್ದಾಗ, ಉಗ್ರರು ಗುಂಡಿನ ಮಳೆಗೆರೆದರು. ಹೀಗಾಗಿ ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು.