Advertisement

ಈ ವಾರವೇ ಸುವೇಂದು ಅಧಿಕಾರಿ ಬಿಜೆಪಿ ಸೇರ್ಪಡೆ?

12:37 AM Dec 16, 2020 | mahesh |

ಕೋಲ್ಕತಾ: ಪ. ಬಂಗಾಲದ ತೃಣಮೂಲ ಕಾಂಗ್ರೆಸ್‌ನ ಬಂಡಾಯ ಮುಖಂಡ ಸುವೇಂದು ಅಧಿಕಾರಿ ಶೀಘ್ರವೇ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

Advertisement

ಒಂದು ತಿಂಗಳ ರಹಸ್ಯ ರಾಜಕಾರಣ ಬಳಿಕ ಈ ವಾರಾಂತ್ಯ ವೇಳೆಗೆ ಸುವೇಂದು “ಕೇಸರಿ ಚಾಣಕ್ಯ’ ಅಮಿತ್‌ ಶಾ ಸಮ್ಮುಖದಲ್ಲಿ ಕಮಲ ಪಾಳೆಯ ಸೇರಲಿದ್ದಾರೆ. ಜತೆಗೆ, ಅವರಿಗೆ ಝೆಡ್‌ ಪ್ಲಸ್‌ ಭದ್ರತೆ ನೀಡಲೂ ಸರಕಾರ ಮುಂದಾಗಿದ್ದು, ಆ ಕುರಿತ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ.

ಇದಕ್ಕೂ ಮೊದಲು ಸುವೇಂದು, ದಿಲ್ಲಿಗೆ ಭೇಟಿ ನೀಡಿ ಬಿಜೆಪಿ ಹೈಕಮಾಂಡ್‌ನ‌ ಆಶೀರ್ವಾದ ಪಡೆಯಲಿದ್ದಾರೆ. ಸುವೇಂದು ಅವರನ್ನು ತಣಿಸಲು ಟಿಎಂಸಿ ಆಂತರಿಕವಾಗಿ ಭಾರೀ ಶ್ರಮಪಟ್ಟು, ಪ್ರಯತ್ನ ಕೈಚೆಲ್ಲಿದೆ. 2021ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಸುವೇಂದು ಸೇರ್ಪಡೆ ಭಾರೀ ಲಾಭ ತರುವ ಸಾಧ್ಯತೆ ಇದೆ. ಪುರುಲಿಯಾ, ಝಾರ್‌ಗ್ರಾಮ್‌, ಮುರ್ಷಿದಾಬಾದ್‌, ಸೇರಿ 9 ಸಂಸತ್‌ ಕ್ಷೇತ್ರಗಳಲ್ಲಿ ಸುವೇಂದು ಅಲೆ ಭರ್ಜರಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next