Advertisement

ಟಿಪ್ಪು ಜಯಂತಿಗೆ ಸಚಿವ ಹೆಗಡೆ ವಿಶೇಷ ಆಮಂತ್ರಿತರು!!

12:11 PM Nov 05, 2017 | |

ಬೆಳಗಾವಿ: ಟಿಪ್ಪು ಜಯಂತಿ ಕಾರ್ಯ ಕ್ರಮಕ್ಕೆ ತಮ್ಮ ಹೆಸರು ಹಾಕದಂತೆ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರೂ ಬೆಳಗಾವಿ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆ ಯಲ್ಲಿ “ವಿಶೇಷ ಆಮಂತ್ರಿತರು’ ಎಂದು ಹೆಸರು ಸೇರಿಸಿದೆ. 

Advertisement

ರಾಜ್ಯ ಸರಕಾರದಿಂದ ನ. 10ರಂದು ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಪ್ರಯುಕ್ತ ಬೆಳಗಾವಿ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ “ವಿಶೇಷ ಆಮಂತ್ರಿತರು’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೆಸರಿದೆ. ಜತೆಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಹೆಸರನ್ನೂ  ನಮೂದಿಸಲಾಗಿದೆ.

ಸಂಸದ ಸುರೇಶ ಅಂಗಡಿ ಅವರೂ ತಮ್ಮ ಹೆಸರು ಹಾಕದಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಸಂಸದರಾದ ಅಂಗಡಿ, ಡಾ| ಪ್ರಭಾಕರ ಕೋರೆ ಹೆಸರು ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next