Advertisement

ಟಿಪ್ಪರ್‌ನಿಂದ ಹೆದ್ದಾರಿಗೆ ಬಿತ್ತು ಬೃಹತ್‌ ಗಾತ್ರದ ಕಲ್ಲು

11:57 PM May 17, 2019 | Team Udayavani |

ಹೆಮ್ಮಾಡಿ: ಮರವಂತೆಯ ಬ್ರೇಕ್‌ವಾಟರ್‌ ಕಾಮಗಾರಿಗೆ ಸಾಗಿ ಸುತ್ತಿದ್ದ ಕಲ್ಲುಗಳು ಟಿಪ್ಪರ್‌ನಿಂದ ಹೆದ್ದಾರಿ ಮಧ್ಯೆ ಬಿದ್ದ ಪ್ರಸಂಗ ಶುಕ್ರವಾರ ಮಧ್ಯಾಹ್ನ ಹೆಮ್ಮಾಡಿಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್‌ ಆ ಟಿಪ್ಪರ್‌ನ ಹಿಂದೆ ಸಂಚರಿಸುತ್ತಿದ್ದ ಕಾರೊಂದು ಸ್ವಲ್ಪದರಲ್ಲೇ ಪಾರಾಗಿದೆ.

Advertisement

ಹೆಮ್ಮಾಡಿಯಲ್ಲಿ ಒಂದರ ಹಿಂದೆ ಒಂದು ಲಾರಿಯಲ್ಲಿ ಬೃಹತ್‌ ಗಾತ್ರದ ಕಲ್ಲುಗಳನ್ನು ಮರವಂತೆಯ ಕಡಲ್ಕೊರೆತ ತಡೆಗಾಗಿ ಕೈಗೊಂಡಿರುವ ಬ್ರೇಕ್‌ ವಾಟರ್‌ ಕಾಮಗಾರಿಗೆ ಸಾಗಿಸುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಈ ಕಲ್ಲು ಬಿದ್ದ ಟಿಪ್ಪರ್‌ ಲಾರಿಯ ಹಿಂಬಾಗಿಲು ಕೂಡ ಸರಿ ಇರಲಿಲ್ಲ. ಇದರಿಂದ ವಾಹನ ಸಂಚಾರಿಸುತ್ತಿದ್ದಾಗ ಏಕಾಏಕಿ ಚಾಲಕ ಬ್ರೇಕ್‌ ಹಾಕಿದ್ದು, ಈ ವೇಳೆ ಕಲ್ಲು ಉರುಳಿ ಕೆಳಕ್ಕೆ ಬಿದ್ದಿದೆ.

ಶುಕ್ರವಾರ ಹಲವೆಡೆಗಳಲ್ಲಿ ಶುಭ ಸಮಾರಂಭಗಳು ಕೂಡ ಇದ್ದುದರಿಂದ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಿತ್ತು. ಈ ಸಂದರ್ಭದಲ್ಲಿ ಹೀಗೆ ಟಿಪ್ಪರ್‌ನಿಂದ ಬೀಳುವ ಕಲ್ಲುಗಳು ಬೇರೊಂದು ವಾಹನಗಳ ಮೇಲೆ ಬಿದ್ದರೆ ಏನು ಗತಿ ಎನ್ನುವುದು ಇಲ್ಲಿ ನಿಲ್ಲಿಸಿದ್ದ ವಾಹನ ಸವಾರರೊಬ್ಬರು ಪ್ರಶ್ನಿಸಿದರು.

ಈ ರೀತಿಯ ಘಟನೆಗಳು ಇದು ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. ಆಗಾಗ ಇಂತಹ ಪ್ರಸಂಗ ಹೆದ್ದಾರಿಯಲ್ಲಿ ನಡೆಯುತ್ತಿದ್ದು, ಹೆದ್ದಾರಿ ಕಾಮಗಾರಿ ಕೂಡ ನಡೆಯುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರ ಸಹಿತ ಎಲ್ಲ ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ.

ಕಠಿನ ಕ್ರಮಕ್ಕೆ ಆಗ್ರಹ
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಯಾವುದೇ ರಸ್ತೆ ಸಂಚಾರ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸದೇ, ನಿಯಮ ಬಾಹಿರವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದುದರಿಂದಲೇ ಈ ಇಂತಹ ಘಟನೆ ನಡೆಯುತ್ತಿದ್ದು, ಇಂತಹ ನಿರ್ಲಕ್ಷé ವಹಿಸುವ ಚಾಲಕರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕು ಎಂದು ಹೆಮ್ಮಾಡಿಯ ವಾಹನ ಸವಾರರೊಬ್ಬರು ಆಗ್ರಹಿಸಿದ್ದಾರೆ.

Advertisement

ಪರಿಶೀಲನೆ ನಡೆಸಿ,ಕ್ರಮ
ಈ ಬಗ್ಗೆ ಗಮನಕ್ಕೆ ಬಂದಿದೆ. ಮಾಹಿತಿ ಪಡೆದು, ಪರಿಶೀಲನೆ ನಡೆಸಿದ ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸರಿಯಾಗಿ ಮಾರ್ಗಸೂಚಿಗಳನ್ನು ಅನುಸರಿಸದೇ ಕಲ್ಲು ಸಾಗಾಟ ಮಾಡುವುದು ನಿಯಮ ಬಾಹಿರ. ಈ ಬಗ್ಗೆ ಸಂಚಾರ ಉಲ್ಲಂಘನೆಯಡಿ ಏನು ಕ್ರಮಗಳಿವೆಯೋ ಅದನ್ನು ತೆಗೆದುಕೊಳ್ಳಲಾಗುವುದು.
– ಪ್ರಮೀಳಾ, ಎಸ್‌ಐ, ಸಂಚಾರಿ ಠಾಣೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next