Advertisement

Hunsur ಕಾಮಗೌಡನಹಳ್ಳಿಯಲ್ಲಿ ಹುಲಿ ಪ್ರತ್ಯಕ್ಷ, ಆತಂಕದಲ್ಲಿ ರೈತರು

08:33 PM Jan 01, 2024 | Team Udayavani |

ಹುಣಸೂರು: ಕೆಲವು ದಿನಗಳಿಂದ ಕಾಣೆಯಾಗಿದ್ದ ಹುಲಿರಾಯ ಮತ್ತೆ ತನ್ನ ಇರುವಿಕೆಯನ್ನು ಸಾದರಪಡಿಸಿದ್ದು, ಸೋಮವಾರ ಸಂಜೆ ಕಾಮಗೌಡನಹಳ್ಳಿ ಜಮೀನಿನಲ್ಲಿ ದಿಡೀರ್ ಪ್ರತ್ಯಕ್ಷವಾಗಿ, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ಹಾಗೂ ಜಮೀನಿನಲ್ಲಿ ಮೇವು ಮೇಯುತ್ತಿದ್ದ ರಾಸುಗಳು ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ತಾಲೂಕಿನ ಹನಗೋಡು ಭಾಗದಲ್ಲಿ ಆಗಾಗ್ಗೆ ಹುಲಿಯು ಕಾಣಿಸಿಕೊಳ್ಳುತ್ತಿತ್ತಲ್ಲದೆ ಜಾನುವಾರು, ಸಾಕು ಪ್ರಾಣಿಗಳನ್ನು ಕೊಂದು ಹಾಕಿತ್ತು ಈ ಸಂಬಂಧ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಹುಲಿಯನ್ನು ಸೆರೆ ಹಿಡಿಯುವಂತೆ ರೈತರು ಮನವಿ ಮಾಡಿದ್ದರು. ಅರಣ್ಯಾಧಿಕಾರಿಗಳು ಸಹ ಕೂಂಬಿಂಗ್ ನಡೆಸಿದ್ದರಾದರೂ ಮತ್ತೆ ಹುಲಿ ಕಾಣೆಯಾಗಿತ್ತು. ಇದೀಗ ಕಾಮಗೌಡನಹಳ್ಳಿಯಲ್ಲಿ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದ ವೇಳೆಯೇ ಪ್ರತ್ಯಕ್ಷವಾಗಿದ್ದು, ಜಾನುವಾರುಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ.

ಈ ವೇಳೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು, ರೈತರು ಜೋರಾಗಿ ಕೂಗಿಕೊಂಡಿದ್ದರಿಂದ ಮತ್ತೆ ಕಾಡಿನತ್ತ ಓಡಿಹೋಗಿದೆ.

ವಿಷಯ ತಿಳಿದು ಆರ್.ಎಫ್.ಓ.ನಂದಕುಮಾರ್, ಡಿ.ಆರ್.ಎಫ್.ಓ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next