Advertisement

ತಾಲೂಕಿನಾದ್ಯಂತ ಗುಡುಗು ಸಹಿತ ಉತ್ತಮ ಮಳೆ

04:03 PM May 21, 2018 | Team Udayavani |

ಬೆಳ್ತಂಗಡಿ: ತಾಲೂಕಿನಾದ್ಯಾಂತ ಶನಿವಾರ ರಾತ್ರಿ ಗುಡುಗು ಮಿಂಚು, ಗಾಳಿ ಸಹಿತ ಉತ್ತಮ ಮಳೆ ಸುರಿದಿದೆ. ತಾಲೂಕಿನ ಉಜಿರೆ, ಧರ್ಮಸ್ಥಳ, ಮುಂಡಾಜೆ, ಚಾರ್ಮಾಡಿ, ಕಕ್ಕಿಂಜೆ, ಗುರುವಾಯನಕೆರೆ, ಅಳದಂಗಡಿ, ಗೇರುಕಟ್ಟೆ, ಕಣಿಯೂರು, ಕೊಯ್ಯೂರು, ಪದ್ಮುಂಜ ಮೊದಲಾದೆಡೆ ಉತ್ತಮ ಮಳೆಯಾಗಿದೆ.

Advertisement

ರಾತ್ರಿ ಸುಮಾರು 1.30ರಿಂದ ಮಳೆ ಸುರಿಯಲು ಆರಂಭವಾಗಿದ್ದು, 3 ಗಂಟೆ ಯವರೆಗೂ ಉತ್ತಮ ಮಳೆಯಾಗಿದೆ. ಈ ವೇಳೆ ಗಾಳಿಯೂ ಬೀಸಿರುವುದರಿಂದ ಅತಂಕ ಸೃಷ್ಟಿಸಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕೃಷಿಕರಿಗೆ ಸಮಸ್ಯೆ  ರಾತ್ರಿ ಧಿಡೀರನೇ ಮಳೆ ಬಂದ ಪರಿಣಾಮ ಕೃಷಿಕರಿಗೆ ಸಮಸ್ಯೆ ಉಂಟಾಯಿತು. ಅಡಕೆ ಬೆಳೆಗಾರರಿಗೆ ಸಮಸ್ಯೆ ಎದುರಾಯಿತು. ಈಗಾಗಲೇ ಹಲವು ಬಾರಿಮಳೆ ಸುರಿದಿದ್ದರಿಂದ ಕೆಲ ಕೃಷಿಕರು ಪೂರ್ವ ತಯಾರಿ ಮಾಡಿಕೊಂಡಿದ್ದರಿಂದ ಹೆಚ್ಚಿನ ಸಮಸ್ಯೆ ಎದುರಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next